ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಚ್.ವಿ.ಮಂಜುನಾಥ್ ಮಾತನಾಡಿ, ‘ಗಾಂಧೀಜಿ ಅವರು ಒಬ್ಬ ಧಾರ್ಮಿಕ ಮುಖಂಡರಲ್ಲ, ಅಧಿಕಾರದಾಹಿಯಲ್ಲ, ಶ್ರೀಮಂತನಲ್ಲ, ಧರ್ಮಗುರುವಲ್ಲ ಇದೆಲ್ಲವನ್ನೂ ಮೀರಿದಂತಹ ವಿಶ್ವಮಾನವರು. ಇದಕ್ಕೆ ಸಾಕ್ಷಿ ಎನ್ನುವಂತೆ ಅವರ ಪಾರ್ಥಿವ ಶರೀರದ ಅಂತಿಮ ಯಾತ್ರೆಯಲ್ಲಿ ಇಡೀ ಪ್ರಪಂಚದ ದೇಶ ವಿದೇಶಗಳ ರಾಜ, ಮಹಾರಾಜರು, ಚಕ್ರವರ್ತಿಗಳು, ರಾಷ್ಟ್ರಾಧ್ಯಕ್ಷರು, ಪ್ರಧಾನ ಮಂತ್ರಿಗಳು ಭಾಗವಹಿಸಿದ್ದರು. ಗಾಂಧೀಜಿ ಅವರು ಭಾರತದಲ್ಲಿ ಹುಟ್ಟಿರುವುದು ನಮ್ಮ ಪುಣ್ಯ’ ಎಂದು ಅಭಿಪ್ರಾಯಪಟ್ಟರು.