<p>ಬಾಗೇಪಲ್ಲಿ: ತಾಲ್ಲೂಕಿನ ಮಾಕಿರೆಡ್ಡಿಪಲ್ಲಿ ತಾಂಡಾದ ಲಂಬಾಣಿ ಜನತೆ ಇಂದಿಗೂ ವಸತಿ ಸೌಕರ್ಯಕ್ಕಾಗಿ ಪರದಾಡುತ್ತಿದ್ದಾರೆ. ಈಗಲೂ ಮಳೆ, ಬಿಸಿಲು, ಗಾಳಿಗೆ ಮೈಯೊಡ್ಡಿ ಬದುಕುವ ಪರಿಸ್ಥಿತಿ ಇವರದ್ದಾಗಿದೆ.<br /> ಹಲವು ಬಾರಿ ಮನವಿ ಮಾಡಿದ್ದರೂ ಜನಪ್ರತಿನಿಧಿಗಳು ಸ್ಪಂದಿಸುತ್ತಿಲ್ಲ ಎಂದು ಅಲವತ್ತುಕೊಳ್ಳುತ್ತಾರೆ.<br /> <br /> ಮಾಕಿರೆಡ್ಡಿಪಲ್ಲಿ ತಾಂಡಾದಲ್ಲಿ 50 ಮನೆಗಳಿವೆ. ಬಹುತೇಕರು ಪರಿಶಿಷ್ಟ ಪಂಗಡ ವರ್ಗಕ್ಕೆ ಸೇರಿದ ಲಂಬಾಣಿಗಳು. ಅತ್ತ ಕೆಲಸವಿಲ್ಲದೇ, ಇತ್ತ ಸರ್ಕಾರದ ನೆರವು ಸಿಗದೆ ಸಂಕಷ್ಟ ಪಡುತ್ತಿದ್ದಾರೆ. 50ರಲ್ಲಿ 40 ಕುಟುಂಬಗಳು ಗುಡಿಸಲಿನಲ್ಲಿ ವಾಸ ಮಾಡುತ್ತಿದ್ದಾರೆ. <br /> <br /> ಇಲ್ಲಿ ನಿತ್ಯ ಹರಿಯುವ ಚರಂಡಿ ನೀರಿನಿಂದ ದುರ್ನಾತ ಹಾಗೂ ಅನಾರೋಗ್ಯದಿಂದ ಮಕ್ಕಳು ಹಾಸಿಗೆ ಹಿಡಿದಿದ್ದಾರೆ. <br /> <br /> ಗ್ರಾಮದಲ್ಲಿ ಒಂದು ಸಿಸ್ಟನ್, ಎರಡು ಕೊಳಾಯಿಗಳು ಇವೆ. ಆದರೆ ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ಕುಡಿಯುವ ನೀರಿಗೆ ಅಭಾವ ಎದುರಿಸುವಂತಾಗಿದೆ. <br /> <br /> ಹ್ಲ್ಲುಲಿನಿಂದ ಗುಡಿಸಲು ನಿರ್ಮಾಣಗೊಂಡಿರುವುದರಿಂದ ಅಪಾಯ ಹೆಚ್ಚು. ಗಾಳಿ ಜೋರಾಗಿ ಬೀಸಿದರೆ ಹುಲ್ಲು ಕಿತ್ತುಕೊಂಡು ಹೋಗುವ ಭಯ ಇವರದ್ದಾಗಿದೆ. ಒಂದೇ ಕಡೆ ಅಡುಗೆ ಮನೆ, ಮಲಗುವ ಕೋಣೆ ಹಾಗೂ ವಿಶ್ರಾಂತಿ ಸ್ಥಳ. <br /> <br /> ಗುಡಿಸಲಿನ ಎದುರು ತೆಂಗಿನ ಮರದ ತಡಕೆಗಳು ಅಡ್ಡಹಾಕಿಕೊಂಡು ಸ್ನಾನ ಮಾಡಬೇಕು. ಇನ್ನು ಶೌಚಾಲಯವಂತೂ ಕನಸಾಗಿರುವುದು ಬಯಲು ಬಹಿರ್ದೆಸೆ ಅನಿವಾರ್ಯ.<br /> <br /> ಈ ಹಿಂದೆ ಕೆಲವು ಸಾಂಕ್ರಾಮಿಕ ರೋಗಗಳು, ಚಿಕುನ್ಗುನ್ಯಾ, ಮಲೇರಿಯಾ ದಾಳಿ ಇಟ್ಟಿದ್ದವು. ಹಿಂದುಳಿದ ಪ್ರದೇಶದ ಅಭಿವೃದ್ಧಿಗೆ ಪಂಚಾಯತ್ ರಾಜ್ ಇಲಾಖೆಗೆ ಹಣ ಹರಿದು ಬರುತ್ತಿದೆ. ಆದರೆ ಸದ್ವಿನಿಯೋಗವಾಗುತ್ತಿಲ್ಲ ಎನ್ನುತ್ತಾರೆ ಇಲ್ಲಿನ ಜನರು.<br /> <br /> ಬಡತನದಲ್ಲಿ ನರಳುತ್ತಿರುವ ನಮಗೆ ಕನಿಷ್ಠ ಮೂಲಸೌಕರ್ಯಗಳನ್ನು ಕಲ್ಪಿಸಬೇಕು. ಮಳೆ ಬಂದರೆ ತೀವ್ರ ತೊಂದರೆಯಾಗಿದೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ತಾಂಡಗಳಿಗೆ ಭೇಟಿ ನೀಡಬೇಕು. ಕೂಡಲೇ ವಿದ್ಯುತ್ ಹಾಗೂ ನೀರಿನ ಸೌಲಭ್ಯ ಕಲ್ಪಿಸಬೇಕು ಎಂದು ಗ್ರಾಮದ ಮಹಿಳೆ ತುಳಸಮ್ಮ `ಪ್ರಜಾವಾಣಿ~ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬಾಗೇಪಲ್ಲಿ: ತಾಲ್ಲೂಕಿನ ಮಾಕಿರೆಡ್ಡಿಪಲ್ಲಿ ತಾಂಡಾದ ಲಂಬಾಣಿ ಜನತೆ ಇಂದಿಗೂ ವಸತಿ ಸೌಕರ್ಯಕ್ಕಾಗಿ ಪರದಾಡುತ್ತಿದ್ದಾರೆ. ಈಗಲೂ ಮಳೆ, ಬಿಸಿಲು, ಗಾಳಿಗೆ ಮೈಯೊಡ್ಡಿ ಬದುಕುವ ಪರಿಸ್ಥಿತಿ ಇವರದ್ದಾಗಿದೆ.<br /> ಹಲವು ಬಾರಿ ಮನವಿ ಮಾಡಿದ್ದರೂ ಜನಪ್ರತಿನಿಧಿಗಳು ಸ್ಪಂದಿಸುತ್ತಿಲ್ಲ ಎಂದು ಅಲವತ್ತುಕೊಳ್ಳುತ್ತಾರೆ.<br /> <br /> ಮಾಕಿರೆಡ್ಡಿಪಲ್ಲಿ ತಾಂಡಾದಲ್ಲಿ 50 ಮನೆಗಳಿವೆ. ಬಹುತೇಕರು ಪರಿಶಿಷ್ಟ ಪಂಗಡ ವರ್ಗಕ್ಕೆ ಸೇರಿದ ಲಂಬಾಣಿಗಳು. ಅತ್ತ ಕೆಲಸವಿಲ್ಲದೇ, ಇತ್ತ ಸರ್ಕಾರದ ನೆರವು ಸಿಗದೆ ಸಂಕಷ್ಟ ಪಡುತ್ತಿದ್ದಾರೆ. 50ರಲ್ಲಿ 40 ಕುಟುಂಬಗಳು ಗುಡಿಸಲಿನಲ್ಲಿ ವಾಸ ಮಾಡುತ್ತಿದ್ದಾರೆ. <br /> <br /> ಇಲ್ಲಿ ನಿತ್ಯ ಹರಿಯುವ ಚರಂಡಿ ನೀರಿನಿಂದ ದುರ್ನಾತ ಹಾಗೂ ಅನಾರೋಗ್ಯದಿಂದ ಮಕ್ಕಳು ಹಾಸಿಗೆ ಹಿಡಿದಿದ್ದಾರೆ. <br /> <br /> ಗ್ರಾಮದಲ್ಲಿ ಒಂದು ಸಿಸ್ಟನ್, ಎರಡು ಕೊಳಾಯಿಗಳು ಇವೆ. ಆದರೆ ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ಕುಡಿಯುವ ನೀರಿಗೆ ಅಭಾವ ಎದುರಿಸುವಂತಾಗಿದೆ. <br /> <br /> ಹ್ಲ್ಲುಲಿನಿಂದ ಗುಡಿಸಲು ನಿರ್ಮಾಣಗೊಂಡಿರುವುದರಿಂದ ಅಪಾಯ ಹೆಚ್ಚು. ಗಾಳಿ ಜೋರಾಗಿ ಬೀಸಿದರೆ ಹುಲ್ಲು ಕಿತ್ತುಕೊಂಡು ಹೋಗುವ ಭಯ ಇವರದ್ದಾಗಿದೆ. ಒಂದೇ ಕಡೆ ಅಡುಗೆ ಮನೆ, ಮಲಗುವ ಕೋಣೆ ಹಾಗೂ ವಿಶ್ರಾಂತಿ ಸ್ಥಳ. <br /> <br /> ಗುಡಿಸಲಿನ ಎದುರು ತೆಂಗಿನ ಮರದ ತಡಕೆಗಳು ಅಡ್ಡಹಾಕಿಕೊಂಡು ಸ್ನಾನ ಮಾಡಬೇಕು. ಇನ್ನು ಶೌಚಾಲಯವಂತೂ ಕನಸಾಗಿರುವುದು ಬಯಲು ಬಹಿರ್ದೆಸೆ ಅನಿವಾರ್ಯ.<br /> <br /> ಈ ಹಿಂದೆ ಕೆಲವು ಸಾಂಕ್ರಾಮಿಕ ರೋಗಗಳು, ಚಿಕುನ್ಗುನ್ಯಾ, ಮಲೇರಿಯಾ ದಾಳಿ ಇಟ್ಟಿದ್ದವು. ಹಿಂದುಳಿದ ಪ್ರದೇಶದ ಅಭಿವೃದ್ಧಿಗೆ ಪಂಚಾಯತ್ ರಾಜ್ ಇಲಾಖೆಗೆ ಹಣ ಹರಿದು ಬರುತ್ತಿದೆ. ಆದರೆ ಸದ್ವಿನಿಯೋಗವಾಗುತ್ತಿಲ್ಲ ಎನ್ನುತ್ತಾರೆ ಇಲ್ಲಿನ ಜನರು.<br /> <br /> ಬಡತನದಲ್ಲಿ ನರಳುತ್ತಿರುವ ನಮಗೆ ಕನಿಷ್ಠ ಮೂಲಸೌಕರ್ಯಗಳನ್ನು ಕಲ್ಪಿಸಬೇಕು. ಮಳೆ ಬಂದರೆ ತೀವ್ರ ತೊಂದರೆಯಾಗಿದೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ತಾಂಡಗಳಿಗೆ ಭೇಟಿ ನೀಡಬೇಕು. ಕೂಡಲೇ ವಿದ್ಯುತ್ ಹಾಗೂ ನೀರಿನ ಸೌಲಭ್ಯ ಕಲ್ಪಿಸಬೇಕು ಎಂದು ಗ್ರಾಮದ ಮಹಿಳೆ ತುಳಸಮ್ಮ `ಪ್ರಜಾವಾಣಿ~ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>