<p><strong>ಅಜ್ಜಂಪುರ</strong>: ತಾಲ್ಲೂಕಿನ ಮಾಕೋನಹಳ್ಳಿ (ಬುಕ್ಕಾಂಬುಧಿ) ಅತ್ತಿಗಟ್ಟೆ ಕ್ರಾಸ್ ಬಳಿ ಭಾನುವಾರ ರಾತ್ರಿ ಸಂಭವಿಸಿದ ಅಪಘಾತದಲ್ಲಿ ಪತಿ-ಪತ್ನಿ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ.</p>.<p>ಅಜ್ಜಂಪುರದಿಂದ ಬುಕ್ಕಾಂಬುಧಿ ಕಡೆಗೆ ಸಾಗುತ್ತಿದ್ದ ಕಾರು, ಬೈಕ್ ನಡುವೆ ಅಪಘಾತ ನಡೆದಿದ್ದು, ವೇಳೆ ಬೈಕ್ನ ಹಿಂಬದಿಯಲ್ಲಿ ಕುಳಿತಿದ್ದ ಹೊಸಹಳ್ಳಿ ತಾಂಡ್ಯದ ನಾಗಿ ಬಾಯಿ (68) ಸ್ಥಳದಲ್ಲಿಯೇ ಮೃತಪಟ್ಟಿದ್ದರೆ. ಪತಿ ಗೋವಿಂದ ನಾಯ್ಕ್ (75) ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.</p>.<p>ಬೈಕ್ ಚಲಾಯಿಸುತ್ತಿದ್ದ ಸಂತೋಷ ನಾಯ್ಕ ಗಾಯಗೊಂಡಿದ್ದಾರೆ. ಅಪಘಾತ ಸ್ಥಳದಲ್ಲಿ ಬಸ್ಗಾಗಿ ಕಾಯುತ್ತಿದ್ದ ಅತ್ತಿಗಟ್ಟೆ ಪಾರ್ವತಿ ಅವರಿಗೆ ಬೈಕ್ ಅಥವಾ ಕಾರಿನ ಬಿಡಿ ಭಾಗ ತಗುಲಿ ಗಾಯಗೊಂಡಿದ್ದಾರೆ. ಇಬ್ಬರೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಮೃತರ ಸಂಬಂಧಿ ಚಂದ್ರಾನಾಯ್ಕ ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಕೈಗೊಂಡಿದ್ದಾರೆ.</p>
<p><strong>ಅಜ್ಜಂಪುರ</strong>: ತಾಲ್ಲೂಕಿನ ಮಾಕೋನಹಳ್ಳಿ (ಬುಕ್ಕಾಂಬುಧಿ) ಅತ್ತಿಗಟ್ಟೆ ಕ್ರಾಸ್ ಬಳಿ ಭಾನುವಾರ ರಾತ್ರಿ ಸಂಭವಿಸಿದ ಅಪಘಾತದಲ್ಲಿ ಪತಿ-ಪತ್ನಿ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ.</p>.<p>ಅಜ್ಜಂಪುರದಿಂದ ಬುಕ್ಕಾಂಬುಧಿ ಕಡೆಗೆ ಸಾಗುತ್ತಿದ್ದ ಕಾರು, ಬೈಕ್ ನಡುವೆ ಅಪಘಾತ ನಡೆದಿದ್ದು, ವೇಳೆ ಬೈಕ್ನ ಹಿಂಬದಿಯಲ್ಲಿ ಕುಳಿತಿದ್ದ ಹೊಸಹಳ್ಳಿ ತಾಂಡ್ಯದ ನಾಗಿ ಬಾಯಿ (68) ಸ್ಥಳದಲ್ಲಿಯೇ ಮೃತಪಟ್ಟಿದ್ದರೆ. ಪತಿ ಗೋವಿಂದ ನಾಯ್ಕ್ (75) ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.</p>.<p>ಬೈಕ್ ಚಲಾಯಿಸುತ್ತಿದ್ದ ಸಂತೋಷ ನಾಯ್ಕ ಗಾಯಗೊಂಡಿದ್ದಾರೆ. ಅಪಘಾತ ಸ್ಥಳದಲ್ಲಿ ಬಸ್ಗಾಗಿ ಕಾಯುತ್ತಿದ್ದ ಅತ್ತಿಗಟ್ಟೆ ಪಾರ್ವತಿ ಅವರಿಗೆ ಬೈಕ್ ಅಥವಾ ಕಾರಿನ ಬಿಡಿ ಭಾಗ ತಗುಲಿ ಗಾಯಗೊಂಡಿದ್ದಾರೆ. ಇಬ್ಬರೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಮೃತರ ಸಂಬಂಧಿ ಚಂದ್ರಾನಾಯ್ಕ ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಕೈಗೊಂಡಿದ್ದಾರೆ.</p>