<p><strong>ಚಿಕ್ಕಮಗಳೂರು: </strong>ತಾಲ್ಲೂಕಿನ ಶ್ರೀಗುರುದತ್ತಾತ್ರೇಯ ಬಾಬಾಬುಡನ್ಸ್ವಾಮಿ ದರ್ಗಾದಲ್ಲಿ ಸಂದಲ್ ಉರುಸ್ ಸೋಮವಾರ ಶುರುವಾಯಿತು.</p>.<p>ಉರುಸ್ ಆಚರಣೆಗೆ ನಾಡಿನ ವಿವಿಧೆಡೆಗಳಿಂದ ಮುಸ್ಲಿಂ ಭಕ್ತರು ಗಿರಿ ಬಂದಿದ್ದಾರೆ. ಗಿರಿಯಲ್ಲಿ ಕಲರವ ಮೇಳೈಸಿತ್ತು. ದರ್ಗಾದ ಮುಂಭಾಗದ ರಸ್ತೆಯಲ್ಲಿ ಸೋಮವಾರ ಸಂಜೆ ಮೆರವಣಿಗೆ ನಡೆಯಿತು.</p>.<p>ಪವಿತ್ರ ಗಂಧವನ್ನು ಮೆರವಣಿಗೆಯಲ್ಲಿ ಗಿರಿಗೆ ತರಲಾಯಿತು. ಭಕ್ತರು ಗೀತೆಗಳನ್ನು ಹಾಡಿದರು. ಭಕ್ತರು ನಾಣ್ಯಗಳನ್ನು, ಹೂವುಗಳನ್ನು ಚಿಮ್ಮಿ ಹರಕೆ ಸಲ್ಲಿಸಿದರು. ಮೆರವಣಿಗೆ ಸೊಬಗನ್ನು ಭಕ್ತರು ಮೊಬೈಲ್ ಫೋನ್ ಕ್ಯಾಮೆರಾಗಳಲ್ಲಿ ಸೆರೆಹಿಡಿದುಕೊಂಡರು.</p>.<p>ಗುಹೆಯ ಒಳಗಡೆಗೆ ಹೋಗಿ ಸಾಂಪ್ರದಾಯಿಕ ವಿಧಿಗಳನ್ನು ನಡೆಸಲು ಜಿಲ್ಲಾಡಳಿತ ಅನುಮತಿ ನೀಡಬೇಕು ಎಂದು ಶಾಖಾದ್ರಿ ಸಯ್ಯದ್ ಗೌಸ್ ಮೊಯುದ್ದಿನ್ ಮತ್ತು ಅವರ ಬೆಂಬಲಿಗರು ಪಟ್ಟುಹಿಡಿದರು. ಕೆಲ ಹೊತ್ತು ಪ್ರವೇಶ ದ್ವಾರದ ಬಳಿಯೇ ನಿಂತರು.</p>.<p>ಪ್ರವೇಶ ದ್ವಾರದ ಬಳಿ ಬ್ಯಾರಿಕೇಡ್ಗಳನ್ನು ಹಾಕಿ, ಪೊಲೀಸ್ ಬಿಗಿ ಭದ್ರತೆ ನಿಯೋಜಿಸಲಾಗಿತ್ತು. ಜಿಲ್ಲಾಡಳಿತ ಅನುಮತಿ ನೀಡದಿದ್ದರಿಂದ ಪ್ರವೇಶ ದ್ವಾರದಲ್ಲೇ ಪ್ರಾರ್ಥನೆ ಸಲ್ಲಿಸಿ, ವಾಪಸ್ ಹೋದರು.ನಗರ, ಗಿರಿಶ್ರೇಣಿ ಮಾರ್ಗ,</p>.<p>‘ಕುಟುಂಬಸಮೇತ ಶ್ರದ್ಧಾಭಕ್ತಿಯಿಂದ ಉರುಸ್ನಲ್ಲಿ ಪಾಲ್ಗೊಳ್ಳುತ್ತೇವೆ. ಎಲ್ಲರಿಗೂ ಒಳಿತಾಗಲಿ ಎಂದು ಪ್ರಾರ್ಥನೆ ಸಲ್ಲಿಸುತ್ತೇವೆ. ಹರಕೆ ತೀರಿಸುತ್ತೇವೆ. ಈ ಮೆರವಣಿಗೆಯಲ್ಲಿ ಸಾಗಿ ಖುಷಿ ಪಡುತ್ತೇವೆ’ ಎಂದು ನಗರದ ಉಪ್ಪಳ್ಳಿ ರಿಯಾಜ್ ಹೇಳಿದರು.</p>.<p>ಶ್ರೀಗುರುದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಸಹಿತ ವಿವಿಧೆಡೆ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಸಿ.ಸಿ.ಟಿವಿ ಕ್ಯಾಮೆರಾ ಕಣ್ಗಾವಲು ಇದೆ. ಪ್ರಸಾದ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು.</p>.<p><strong>ಅಂತರ ಪಾಲನೆಗೆ ತೀಲಾಂಜಲಿ: </strong>ಕೋವಿಡ್ ಮಾರ್ಗಸೂಚಿಯ ಅಂತರ ಪಾಲನೆಯನ್ನು ಗಾಳಿಗೆ ತೂರಲಾಗಿತ್ತು.</p>.<p>ಜಿಲ್ಲಾಧಿಕಾರಿ ಕೆ.ಎನ್.ರಮೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಎಂ.ಹಾಕೆ, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಆರ್.ರೂಪಾ, ಉಪವಿಭಾಗಾಧಿಕಾರಿ ಡಾ.ಎಚ್.ಎಲ್.ನಾಗರಾಜ್ ಅವರು ಸ್ಥಳದಲ್ಲಿದ್ದು ನಿಗಾ ವಹಿಸಿದ್ದರು.</p>.<p>ಮುಖಂಡರಾದ ಸಿರಾಜ್ ಹುಸೇನ್, ಯೂಸುಫ್ ಹಾಜಿ, ಶಾಹಿದ್, ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಮಗಳೂರು: </strong>ತಾಲ್ಲೂಕಿನ ಶ್ರೀಗುರುದತ್ತಾತ್ರೇಯ ಬಾಬಾಬುಡನ್ಸ್ವಾಮಿ ದರ್ಗಾದಲ್ಲಿ ಸಂದಲ್ ಉರುಸ್ ಸೋಮವಾರ ಶುರುವಾಯಿತು.</p>.<p>ಉರುಸ್ ಆಚರಣೆಗೆ ನಾಡಿನ ವಿವಿಧೆಡೆಗಳಿಂದ ಮುಸ್ಲಿಂ ಭಕ್ತರು ಗಿರಿ ಬಂದಿದ್ದಾರೆ. ಗಿರಿಯಲ್ಲಿ ಕಲರವ ಮೇಳೈಸಿತ್ತು. ದರ್ಗಾದ ಮುಂಭಾಗದ ರಸ್ತೆಯಲ್ಲಿ ಸೋಮವಾರ ಸಂಜೆ ಮೆರವಣಿಗೆ ನಡೆಯಿತು.</p>.<p>ಪವಿತ್ರ ಗಂಧವನ್ನು ಮೆರವಣಿಗೆಯಲ್ಲಿ ಗಿರಿಗೆ ತರಲಾಯಿತು. ಭಕ್ತರು ಗೀತೆಗಳನ್ನು ಹಾಡಿದರು. ಭಕ್ತರು ನಾಣ್ಯಗಳನ್ನು, ಹೂವುಗಳನ್ನು ಚಿಮ್ಮಿ ಹರಕೆ ಸಲ್ಲಿಸಿದರು. ಮೆರವಣಿಗೆ ಸೊಬಗನ್ನು ಭಕ್ತರು ಮೊಬೈಲ್ ಫೋನ್ ಕ್ಯಾಮೆರಾಗಳಲ್ಲಿ ಸೆರೆಹಿಡಿದುಕೊಂಡರು.</p>.<p>ಗುಹೆಯ ಒಳಗಡೆಗೆ ಹೋಗಿ ಸಾಂಪ್ರದಾಯಿಕ ವಿಧಿಗಳನ್ನು ನಡೆಸಲು ಜಿಲ್ಲಾಡಳಿತ ಅನುಮತಿ ನೀಡಬೇಕು ಎಂದು ಶಾಖಾದ್ರಿ ಸಯ್ಯದ್ ಗೌಸ್ ಮೊಯುದ್ದಿನ್ ಮತ್ತು ಅವರ ಬೆಂಬಲಿಗರು ಪಟ್ಟುಹಿಡಿದರು. ಕೆಲ ಹೊತ್ತು ಪ್ರವೇಶ ದ್ವಾರದ ಬಳಿಯೇ ನಿಂತರು.</p>.<p>ಪ್ರವೇಶ ದ್ವಾರದ ಬಳಿ ಬ್ಯಾರಿಕೇಡ್ಗಳನ್ನು ಹಾಕಿ, ಪೊಲೀಸ್ ಬಿಗಿ ಭದ್ರತೆ ನಿಯೋಜಿಸಲಾಗಿತ್ತು. ಜಿಲ್ಲಾಡಳಿತ ಅನುಮತಿ ನೀಡದಿದ್ದರಿಂದ ಪ್ರವೇಶ ದ್ವಾರದಲ್ಲೇ ಪ್ರಾರ್ಥನೆ ಸಲ್ಲಿಸಿ, ವಾಪಸ್ ಹೋದರು.ನಗರ, ಗಿರಿಶ್ರೇಣಿ ಮಾರ್ಗ,</p>.<p>‘ಕುಟುಂಬಸಮೇತ ಶ್ರದ್ಧಾಭಕ್ತಿಯಿಂದ ಉರುಸ್ನಲ್ಲಿ ಪಾಲ್ಗೊಳ್ಳುತ್ತೇವೆ. ಎಲ್ಲರಿಗೂ ಒಳಿತಾಗಲಿ ಎಂದು ಪ್ರಾರ್ಥನೆ ಸಲ್ಲಿಸುತ್ತೇವೆ. ಹರಕೆ ತೀರಿಸುತ್ತೇವೆ. ಈ ಮೆರವಣಿಗೆಯಲ್ಲಿ ಸಾಗಿ ಖುಷಿ ಪಡುತ್ತೇವೆ’ ಎಂದು ನಗರದ ಉಪ್ಪಳ್ಳಿ ರಿಯಾಜ್ ಹೇಳಿದರು.</p>.<p>ಶ್ರೀಗುರುದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಸಹಿತ ವಿವಿಧೆಡೆ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಸಿ.ಸಿ.ಟಿವಿ ಕ್ಯಾಮೆರಾ ಕಣ್ಗಾವಲು ಇದೆ. ಪ್ರಸಾದ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು.</p>.<p><strong>ಅಂತರ ಪಾಲನೆಗೆ ತೀಲಾಂಜಲಿ: </strong>ಕೋವಿಡ್ ಮಾರ್ಗಸೂಚಿಯ ಅಂತರ ಪಾಲನೆಯನ್ನು ಗಾಳಿಗೆ ತೂರಲಾಗಿತ್ತು.</p>.<p>ಜಿಲ್ಲಾಧಿಕಾರಿ ಕೆ.ಎನ್.ರಮೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಎಂ.ಹಾಕೆ, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಆರ್.ರೂಪಾ, ಉಪವಿಭಾಗಾಧಿಕಾರಿ ಡಾ.ಎಚ್.ಎಲ್.ನಾಗರಾಜ್ ಅವರು ಸ್ಥಳದಲ್ಲಿದ್ದು ನಿಗಾ ವಹಿಸಿದ್ದರು.</p>.<p>ಮುಖಂಡರಾದ ಸಿರಾಜ್ ಹುಸೇನ್, ಯೂಸುಫ್ ಹಾಜಿ, ಶಾಹಿದ್, ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>