ಚಿಕ್ಕಮಗಳೂರು | ಮುರಿದು ಬಿದ್ದ ಆಟಿಕೆ: ಸೊರಗಿದ ಕಲ್ಯಾಣನಗರದ ಬಸವೇಶ್ವರ ಉದ್ಯಾನ
ಉಮೇಶ್ ಯು.ಬಿ.
Published : 12 ನವೆಂಬರ್ 2025, 4:31 IST
Last Updated : 12 ನವೆಂಬರ್ 2025, 4:31 IST
ಫಾಲೋ ಮಾಡಿ
Comments
ಬಸವೇಶ್ವರ ಉದ್ಯಾನದಲ್ಲಿ ಕುಳಿತುಕೊಳ್ಳುವ ಆಸನಗಳ ಮೇಲೂ ಗಿಡಗಳ ಬೆಳೆದಿರುವುದು
ಉದ್ಯಾನದ ಫಲಕ ಕೂಡ ಮುಚ್ಚುವಂತೆ ಗಿಡಗಳು ಬೆಳೆದಿರುವುದು
ಎಲ್ಲೆಂದರಲ್ಲಿ ಕಸ, ಗೇಟ್ ಸುತ್ತ ಗಿಡ
ಉದ್ಯಾನದಲ್ಲಿ ಅಳವಡಿಸಿರುವ ಬೊಂಬೆ ಆಕಾರದ ಕಸದ ಬುಟ್ಟಿಗಳಲ್ಲಿ ಕಸ ತುಂಬಿ ಹೊರಗೆ ಚಲ್ಲುತ್ತಿದೆ. ಸುತ್ತಮುತ್ತ ಕೂಡ ಕಸ ಹರಡಿಕೊಂಡಿದೆ. ಉದ್ಯಾನದ ಸುತ್ತಲು ನಿರ್ಮಿಸಿರುವ ಬೇಲಿಗೆ ಕಾಡು ಸಸ್ಯಗಳು ಹಾಗೂ ಬಳ್ಳಿಗಳು ಹಬ್ಬಿಕೊಂಡಿವೆ. ಗೇಟ್ ಹಾಕಲು ಬೀಗ ಕೂಡ ಇಲ್ಲವಾಗಿದೆ. ಒಟ್ಟಾರೆ ಉದ್ಯಾನ ನಿರ್ವಹಣೆಯೇ ಇಲ್ಲದೆ ಸೊರಗಿದ್ದು ಸೌಂದರ್ಯ ಸಂಪೂರ್ಣ ಹಾಳಾಗಿದೆ. ನಿರ್ವಹಣೆ ಮಾಡಲು ಮನವಿ ಮಾಡಿ ಸುಸ್ತಾಗಿರುವ ನಿವಾಸಿಗಳು ದೂರದಲ್ಲಿರುವ ಬೇರೆ ಬೇರೆ ಉದ್ಯಾನಗಳನ್ನು ಹುಡುಕಿಕೊಂಡು ಹೋಗುತ್ತಿದ್ದಾರೆ.