ಬೀರೂರು ಹೋಬಳಿಯಲ್ಲಿ 817 ರೈತರು ಈಗಾಗಲೇ ನೋಂದಾಯಿಸಿಕೊಂಡಿದ್ದು 23ಸಾವಿರ ಕ್ವಿಂಟಲ್ ರಾಗಿ ಖರೀದಿಸಲು ಅವಕಾಶ ನೀಡಲಾಗಿದೆ. ಎಪಿಎಂಸಿ ಪ್ರಾಂಗಣದಲ್ಲಿ ರೈತರು ಬಂದು ಕಾಯಬಾರದು ಮತ್ತು ಗೊಂದಲಗಳಿಗೆ ಆಸ್ಪದ ನೀಡಬಾರದು ಎಂದು ಖರೀದಿ ಕೇಂದ್ರದಿಂದಲೇ ರೈತರಿಗೆ ದೂರವಾಣಿ ಕರೆ ಮಾಡಿ, ರಾಗಿಯೊಂದಿಗೆ ಬರುವಂತೆ ತಿಳಿಸಲಾಗುತ್ತಿದೆ. ರೈತರು ತಂದ ರಾಗಿಯ ಗುಣಮಟ್ಟ ಪರಿಶೀಲಿಸಿ, ರಾಶಿ ಮಾಡಿಸಿ ಸರ್ಕಾರ ನೀಡಿರುವ ಹೊಸ ಚೀಲಗಳಲ್ಲಿ ಭರ್ತಿ ಮಾಡಿ ತೂಕ ಮಾಡಲಾಗುವುದು. ರೈತರು ತಂದ ಚೀಲಗಳನ್ನು ಅವರಿಗೇ ವಾಪಾಸ್ ಮಾಡಲಾಗುವುದು. ರೈತರ ಎದುರೇ ರಾಶಿ ಮಾಡಿ, ತೂಕ ಮಾಡಿ 51ಕಿಲೋಗೆ ನಿಗದಿಪಡಿಸಿ ಚೀಲಗಳನ್ನು ಯಂತ್ರ ಬಳಸಿ ಹೊಲಿಯಲಾಗುವುದು, ಚೀಲದ ತೂಕ ಮತ್ತು ಸೋರಿಕೆ ಪರಿಗಣಿಸಿ 50 ಕೆ.ಜಿಗೆ ಸರ್ಕಾರ ಹಣ ಪಾವತಿಸುತ್ತದೆ ಎಂದು ಮಾಹಿತಿ ನೀಡಿದರು.