‘ಸ್ಥಳೀಯರು, ಅರಣ್ಯ ಸಿಬ್ಬಂದಿ ಹಗ್ಗ ಬಳಸಿ ನೀತು, ಧ್ಯಾನ್ನನ್ನು ನಾಲೆಯಿಂದ ಹೊರಕ್ಕೆ ಎಳೆದಿದ್ದಾರೆ. ಅಷ್ಟರೊಳಗೆ ಕಾರು ಮುಳುಗಿ, ಇನ್ನಿಬ್ಬರು ನೀರುಪಾಲಾಗಿದ್ದಾರೆ. ಅವಘಡಕ್ಕೂ ಮುನ್ನ ಮಂಜುನಾಥ್ ಅವರು ಸಂಬಂಧಿಕರಿಗೆ ಫೋನ್ ಮಾಡಿ ಮಾತಾಡಿದ್ದರು ಎನ್ನಲಾದ ಆಡಿಯೊ ವೈರಲ್ ಆಗಿದೆ. ಮಾಹಿತಿ ಕಲೆ ಹಾಕಲಾಗುತ್ತಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಎಂ.ಹಾಕೆ ‘ಪ್ರಜಾವಾಣಿ’ಗೆ ತಿಳಿಸಿದರು.