ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಬ್ಬರು ಸಾವು, ಆರು ಮಂದಿಗೆ ಗಾಯ

ಗಿರಿಶ್ರೇಣಿಯ ಮಾಣಿಕ್ಯಧಾರಾ ಮಾರ್ಗದಲ್ಲಿ ಉರುಳಿದ ಕಾರು
Last Updated 7 ಜುಲೈ 2019, 15:59 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ತಾಲ್ಲೂಕಿನ ಗಿರಿ ಶ್ರೇಣಿಯ ಮಾಣಿಕ್ಯಾಧಾರದಿಂದ ವಾಪಸ್ಸಾಗುತ್ತಿದ್ದಾಗ ಕಾರು ಉರುಳಿಬಿದ್ದು ಸಮೀರಾ ಬಾನು (35)ಎಂಬುವರು ಮೃತಪಟ್ಟು, 6 ಮಂದಿ ಭಾನುವಾರ ಗಾಯಗೊಂಡಿದ್ದಾರೆ.

ಸಂಜೆ 4.30ರ ಹೊತ್ತಿಗೆ ಅವಘಡ ಸಂಭವಿಸಿದೆ. ಸಮೀರಾ ಪತಿ ಅಬೂಬಕ್ಕರ್‌ (43), ಪುತ್ರ ಬಾಸಿದ್‌ (12), ಪುತ್ರಿಯರಾದ ಸಾಲ್ವಾ (6) ಆಯಿಷಾ (4) , ಅಬೂಬಕ್ಕರ್‌ ಸಹೋದರ ಮಹಮ್ಮದ್‌ ಬ್ಯಾರಿ ಅಲಿಯಾಸ್‌ ಜಲಾನಿ (53), ಜಲಾನಿ ಪುತ್ರಿ (11) ಗಾಯಗೊಂಡವರು. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಕಳಿಸಲಾಗಿದೆ.

ಅಬೂಬಕ್ಕರ್‌ ಕುಟುಂಬ ಉಡುಪಿ ಜಿಲ್ಲೆಯ ಪಡುಬಿದ್ರಿ ತಾಲ್ಲೂಕಿನ ಕಂಚಿನಡ್ಕ ಊರಿನವರು. ಮಹಮ್ಮದ್‌ ಬ್ಯಾರಿ ಅವರು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಮಂಜನಾಡ ಊರಿನವರು. ಪ್ರವಾಸಕ್ಕೆ ಬಂದಿದ್ದರು.

ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT