ಕಳಸ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೊರನಾಡಿನ ಅನ್ನಪೂರ್ಣೇಶ್ವರಿ ಸನ್ನಿಧಿಯಲ್ಲಿ ಭಾನುವಾರ ವಿಶೇಷ ಪೂಜೆ, ಹೋಮ ನೆರವೇರಿಸಿದರು.
ಪುತ್ರ ಬಿ.ವೈ. ವಿಜಯೇಂದ್ರ ಮತ್ತು ಕುಟುಂಬದ ಸದಸ್ಯರೊಂದಿಗೆ ಅವರು ನವಚಂಡಿ ಪಾರಾಯಣ ನಡೆಸಿದರು. ಆನಂತರ ಅನ್ನಪೂರ್ಣೇಶ್ವರಿಗೆ ರಥೋತ್ಸವ ಸೇವೆ ಮತ್ತು ಮಹಾಚಂಡಿಕಾ ಹೋಮ ನೆರವೇರಿಸಿದರು.
ಲೋಕಸಭಾ ಚುನಾವಣೆಗೂ ಮುನ್ನ ಯಡಿಯೂರಪ್ಪ ಕುಟುಂಬವು ಈ ಸೇವೆಗಳನ್ನು ಸಲ್ಲಿಸಿದ್ದು ವಿಶೇಷವಾಗಿತ್ತು. ದೇವಸ್ಥಾನದ ಮುಖ್ಯಸ್ಥ ಜಿ. ಭೀಮೇಶ್ವರ ಜೋಷಿ ಪ್ರಸಾದ ವಿತರಿಸಿದರು. ರಾಮನಾರಾಯಣ ಜೋಷಿ ಅವರು ಯಡಿಯೂರಪ್ಪ ಕುಟುಂಬವನ್ನು ದೇಗುಲಕ್ಕೆ ಬರಮಾಡಿಕೊಂಡರು.