ಸುತ್ತಮುತ್ತಲ ಹತ್ತಾರು ಗ್ರಾಮಗಳ ಭಕ್ತರು ದೇವರ ದರ್ಶನ ಪಡೆದು, ಹೂ-ಹಣ್ಣು ಅರ್ಪಿಸಿದರು. ದುಗ್ಗಲ ಹೊತ್ತು ಹರಕೆ ತೀರಿಸಿದರು. ‘ಜಾತ್ರೆಗೆ ಬಂದು, ದೇವರ ದರ್ಶನ ಪಡೆದು ಹೋದರೆ ಹುಳು-ಹುಪ್ಪಟೆ ಕಾಟ ತಪ್ಪುತ್ತದೆ. ಜಾನುವಾರುಗಳು ಆರೋಗ್ಯವಾಗಿರುತ್ತವೆ ಎಂಬ ನಂಬಿಕೆ ಇದೆ. ಆದ್ದರಿಂದ ಪ್ರತಿ ವರ್ಷವೂ ಜಾತ್ರೆ ವೇಳೆ ಮಕ್ಕಳ ಸಮೇತ ಬರುತ್ತೇವೆ’ ಎನ್ನುತ್ತಾರೆ ನಾರಣಾಪುರದ ಭಾಗ್ಯಮ್ಮ.