ಚಿಕ್ಕಮಗಳೂರು: ನಗರದ ಕೆಂಪನಹಳ್ಳಿಯ ಚಂದ್ರಕಟ್ಟೆ ಕೆರೆಯಲ್ಲಿ ಈಜಲು ಹೋಗಿ ಬಾಲಕ ಶಿವಾಸ್ (12) ನೀರು ಪಾಲಾಗಿದ್ದಾನೆ.
ಲಕ್ಯಾಗ್ರಾಮದ ದಿವಂಗತ ಹುಲಿಯಪ್ಪ ಮತ್ತು ರಾಧಾ ದಂಪತಿ ಪುತ್ರನಾದ ಶಿವಾಸ್ ಕೆಂಪನಹಳ್ಳಿಯಲ್ಲಿ ಅಜ್ಜನ ಮನೆಯಲ್ಲಿ (ತಾಯಿಯ ತವರು ಮನೆ)ವಾಸ ಇದ್ದ. ಆರನೇ ತರಗತಿಯ ವಿದ್ಯಾರ್ಥಿ.ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ಕಾರ್ಯಾಚರಣೆ ನಡೆಸಿ ಮೃತದೇಹ ಹೊರತೆಗೆದಿದ್ದಾರೆ.
‘ಕೆರೆ ದಂಡೆಯಲ್ಲಿ ಬಾಲಕನ ಬಟ್ಟೆಗಳು ಸಿಕ್ಕಿವೆ. ಈಜಲು ಹೋಗಿ ನೀರು ಪಾಲಾಗಿದ್ದಾನೆ’ ಎಂದು ಪೊಲೀಸರು ತಿಳಿಸಿದ್ದಾರೆ.