ಹೊಂದಾಣಿಕೆಗೆ ಸಿದ್ಧವಾಗಿರುವುದಾಗಿ ಜೆಡಿಎಸ್ ಹೇಳಿದೆ. ನಾಮಪತ್ರಗಳ ವಾಪಸ್ ಪ್ರಕ್ರಿಯೆ ಮುಗಿಯುವವರೆಗೆ ಕಾದು ನೋಡಲು ಕೆಲವು ಪಕ್ಷಗಳು ಮೌನವಾಗಿರಲು ನಿರ್ಧರಿಸಿವೆ. ಸ್ಪರ್ಧಿಸದ ಕಡೆ ಯಾರನ್ನು ಬೆಂಬಲಿಸಿದರೆ ಅನುಕೂಲ ಎಂಬ ನಿಟ್ಟಿನಲ್ಲಿ ಕೆಲವು ಪಕ್ಷಗಳು ಲೆಕ್ಕಾಚಾರದಲ್ಲಿ ತೊಡಗಿವೆ. ಪಕ್ಷೇತರರನ್ನು ಬೆಂಬಲಿಸಿ ಗೆದ್ದರೆ ‘ಬುಟ್ಟಿ’ಗೆ ಹಾಕಿಕೊಳ್ಳುವ ತಂತ್ರಗಳತ್ತಲೂ ಚಿತ್ತ ಹರಿಸಿವೆ.