ತಮಿಳುನಾಡಿನವರಾದ ಉಮೇಶ್ ಕುಟುಂಬ ಹಲವು ದಶಕಗಳ ಹಿಂದೆ ಕೆಲಸ ಅರಸಿ ಕ್ವರ್ಡಿಹಿತ್ಲಿಗೆ ಬಂದು ನೆಲೆಸಿತ್ತು. ತೋಟ ಕಾರ್ಮಿಕರಾಗಿದ್ದ ಹೆತ್ತವರ ಪ್ರೋತ್ಸಾಹದಿಂದ ಉತ್ತಮ ಶಿಕ್ಷಣ ಪಡೆದು ಸಿಂಡಿಕೇಟ್ ಬ್ಯಾಂಕಿನಲ್ಲಿ ಉದ್ಯೋಗ ಪಡೆದ ಉಮೇಶ್, ಬೆಳಗಾವಿ ಜಿಲ್ಲೆಯಲ್ಲಿ ವೃತ್ತಿ ಜೀವನ ಆರಂಭಿಸಿ, ಕೊಪ್ಪ, ಹರಿಹರಪುರ, ಎಲೆ ಮಡಲು ಶಾಖೆಗಳಲ್ಲಿ ವ್ಯವಸ್ಥಾಪಕ ರಾಗಿದ್ದರು. ಬಳಿಕ ಹಿರಿಯ ವ್ಯವಸ್ಥಾಪಕರಾಗಿ ಬಡ್ತಿ ಹೊಂದಿ ಚಿಕ್ಕಮಗಳೂರು ವಿಭಾಗೀಯ ಕಚೇರಿಗೆ ವರ್ಗಾವಣೆಗೊಂಡಿದ್ದರು.