‘ರಾಜ್ಯದಲ್ಲಿ ಆಮ್ಲಜನಕ ಕೊರತೆಯನ್ನು ನೀಗಿಸಲು ಸರ್ಕಾರವು ಸಂಪೂರ್ಣವಾಗಿ ಕ್ರಮ ಕೈಗೊಂಡಿದೆ. ಆದರೆ, ಕೇವಲ ಆಮ್ಲಜನಕದಿಂದ ಕೋವಿಡ್ ನಿಯಂತ್ರಿಸಲು ಸಾಧ್ಯವಿಲ್ಲ. ಗ್ರಾಮಮಟ್ಟದಲ್ಲಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಪಂಚಾಯಿತಿ ಸಿಬ್ಬಂದಿ, ಗ್ರಾಮ ಲೆಕ್ಕಾಧಿಕಾರಿಗಳ ಮೂಲಕ ಹೊರಗಿನಿಂದ ಗ್ರಾಮಕ್ಕೆ ಬರುವವರ ಮೇಲೆ ನಿಗಾವಿಸಿಬೇಕು. ಬೆಂಗಳೂರು ಸೇರಿದಂತೆ ಹೊರಗಿನಿಂದ ಬರುವವರು ನೆಗೆಟಿವ್ ವರದಿ ಪಡೆದಿದ್ದರೂ, ಗ್ರಾಮಮಟ್ಟದಲ್ಲಿ ಇನ್ನೊಮ್ಮೆ ಪರೀಕ್ಷೆಗೊಳಪಡಿಸಿ, ನೆಗೆಟಿವ್ ಎಂಬುದನ್ನು ಖಾತರಿ ಪಡಿಸಿ
ಕೊಳ್ಳಬೇಕು. ದುಡಿಮೆಗಾಗಿ ಹೊರಗೆ ಹೋಗುವವರನ್ನು ತಡೆಯುವುದು ಬೇಡ. ಆದರೆ, ಗ್ರಾಮಗಳಿಗೆ ಬರುವ ವರನ್ನು ಕಡ್ಡಾಯವಾಗಿ ಕ್ವಾರಂಟೈನ್ ಮಾಡಿ ಸೋಂಕು ಇಲ್ಲ ಎಂಬುದನ್ನು ಖಚಿತಪಡಿಸಿಕೊಂಡರೆ ಗ್ರಾಮಮಟ್ಟದಲ್ಲಿ ಸೋಂಕು ಉಲ್ಬಣವಾಗುವುದನ್ನು ತಡೆಯಬಹುದು’ ಎಂದರು.