ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಉಚಿತವಾಗಿ ಅಕ್ಕಿ, ಲ್ಯಾಪ್ಟಾಪ್ ಕೊಡುತ್ತೇವೆ ಎಂದು ಪಕ್ಷಗಳು ಪ್ರಣಾಳಿಕೆಯಲ್ಲಿ ಹೇಳುವುದಿಲ್ಲವೇ? ಅಕ್ಕಿ ಹಸಿವು ನೀಗಿಸುತ್ತದೆ. ಹಾಗೆಯೇ ಲಸಿಕೆ ಜೀವ ಉಳಿಸುತ್ತದೆ. ಉಚಿತವಾಗಿ ಲಸಿಕೆ ಪೂರೈಸುವುದು ಶ್ರೇಷ್ಠವಲ್ಲವೆ? ಅದರಲ್ಲಿ ಹುಡುಕಲು ತಪ್ಪು ಏನಿದೆ?’ ಎಂದು ಕೇಳಿದರು.