<p><strong>ಕಳಸ</strong>: ಇಲ್ಲಿನ ಸಾಯಿ ಮಂದಿರದಲ್ಲಿ ಉದ್ಯಮಿ ಕೆ.ಕೆ.ಬಾಲಕೃಷ್ಣ ಭಟ್ ಕುಟುಂಬಸ್ಥರು ದಸರಾ ಬೊಂಬೆಗಳನ್ನು ಜೋಡಿಸಿದ್ದು, ಸ್ಥಳೀಯರನ್ನು ಸೆಳೆಯುತ್ತಿವೆ.</p>.<p>ಸಾಲುಸಾಲಾಗಿ ಬೊಂಬೆಗಳನ್ನು ಜೋಡಿಸಿದ್ದು, ಕುಟುಂಬದ ಸದಸ್ಯರೇ ಬೊಂಬೆಗಳ ವೈಶಿಷ್ಟ್ಯತೆ ವಿವರಿಸುವುದು ವಿಶೇಷ.</p>.<p>ಪುರಾಣ ಕಥೆಗಳನ್ನು ಸಾರುವ ಬೊಂಬೆಗಳ ಜತೆಗೆ ಆಧುನಿಕತೆಯ ದರ್ಶನವನ್ನೂ ಕೆಲ ಬೊಂಬೆಗಳು ಮಾಡುತ್ತವೆ. ಪುರಾತನ ವಸ್ತುಗಳ ಸಂಗ್ರಹದ ಜತೆಗೆ ನವೀನ ಮಾದರಿಗಳು ಕೂಡ ಬೊಂಬೆಗಳ ಮಗ್ಗುಲಲ್ಲೇ ಇವೆ.</p>.<p>ರಾಮಾಯಣ, ಮಹಾಭಾರತದ ಪ್ರಸಂಗಗಳನ್ನು ಚಿತ್ರಿಸುವ ಸಾಂಪ್ರದಾಯಿಕ ಬೊಂಬೆಗಳು ಈ ಪ್ರದರ್ಶನದ ಪ್ರಮುಖ ಭಾಗ. ಬಾಲಕೃಷ್ಣ, ರಾಧಾಕೃಷ್ಣ, ಬಕಾಸುರ, ರಾಮ-ಲಕ್ಷ್ಮಣ, ಶಂಕರಾಚಾರ್ಯ, ಈಶ್ವರನ ಬೊಂಬೆಗಳು ಗಮನ ಸೆಳೆಯುತ್ತವೆ.</p>.<p>ಮಲೆನಾಡಿನ ಬೆಟ್ಟ ಗುಡ್ಡಗಳ ಮಾದರಿಯ ಜೊತೆಗೆ ಕಣಿವೆಯಲ್ಲಿ ಓಡಾಡುವ ಅತ್ಯಾಧುನಿಕ ವಾಹನಗಳ ಮಾದರಿ ಕೂಡ ವಾಸ್ತವಿಕತೆಗೆ ಹತ್ತಿರವಾಗಿದೆ.</p>.<p>ಪ್ಯಾರಿಸ್ನ ಐಫೆಲ್ ಟವರ್, ಮಲೇಶ್ಯಾದ ಅವಳಿ ಕಟ್ಟಡ, ದುಬೈನ ಬುರ್ಝ್ ಖಲಿಫಾದ ಮಾದರಿಗಳು ಗಮನ ಸೆಳೆಯುತ್ತಿವೆ. 10 ವರ್ಷಗಳಿಂದ ಈ ಬೊಂಬೆ ಪ್ರದರ್ಶನವನ್ನು ನಡೆಸಲಾಗುತ್ತಿದೆ.</p>.<p>ಬಾಲಕೃಷ್ಣ ಭಟ್ ಅವರ ಮಕ್ಕಳು ಮತ್ತು ಕುಟುಂಬಸ್ಥರು ಈ ಬೊಂಬೆ ಪ್ರದರ್ಶನವನ್ನು ಅತ್ಯಂತ ಕಲೆಗಾರಿಕೆಯಿಂದ ಮಾಡಿದ್ದಾರೆ. ಆಸಕ್ತರು ಸಾಯಿ ಮಂದಿರಕ್ಕೆ ಬಂದು ಬೊಂಬೆ ಪ್ರದರ್ಶನ ನೋಡಿ ಆನಂದಿಸಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಳಸ</strong>: ಇಲ್ಲಿನ ಸಾಯಿ ಮಂದಿರದಲ್ಲಿ ಉದ್ಯಮಿ ಕೆ.ಕೆ.ಬಾಲಕೃಷ್ಣ ಭಟ್ ಕುಟುಂಬಸ್ಥರು ದಸರಾ ಬೊಂಬೆಗಳನ್ನು ಜೋಡಿಸಿದ್ದು, ಸ್ಥಳೀಯರನ್ನು ಸೆಳೆಯುತ್ತಿವೆ.</p>.<p>ಸಾಲುಸಾಲಾಗಿ ಬೊಂಬೆಗಳನ್ನು ಜೋಡಿಸಿದ್ದು, ಕುಟುಂಬದ ಸದಸ್ಯರೇ ಬೊಂಬೆಗಳ ವೈಶಿಷ್ಟ್ಯತೆ ವಿವರಿಸುವುದು ವಿಶೇಷ.</p>.<p>ಪುರಾಣ ಕಥೆಗಳನ್ನು ಸಾರುವ ಬೊಂಬೆಗಳ ಜತೆಗೆ ಆಧುನಿಕತೆಯ ದರ್ಶನವನ್ನೂ ಕೆಲ ಬೊಂಬೆಗಳು ಮಾಡುತ್ತವೆ. ಪುರಾತನ ವಸ್ತುಗಳ ಸಂಗ್ರಹದ ಜತೆಗೆ ನವೀನ ಮಾದರಿಗಳು ಕೂಡ ಬೊಂಬೆಗಳ ಮಗ್ಗುಲಲ್ಲೇ ಇವೆ.</p>.<p>ರಾಮಾಯಣ, ಮಹಾಭಾರತದ ಪ್ರಸಂಗಗಳನ್ನು ಚಿತ್ರಿಸುವ ಸಾಂಪ್ರದಾಯಿಕ ಬೊಂಬೆಗಳು ಈ ಪ್ರದರ್ಶನದ ಪ್ರಮುಖ ಭಾಗ. ಬಾಲಕೃಷ್ಣ, ರಾಧಾಕೃಷ್ಣ, ಬಕಾಸುರ, ರಾಮ-ಲಕ್ಷ್ಮಣ, ಶಂಕರಾಚಾರ್ಯ, ಈಶ್ವರನ ಬೊಂಬೆಗಳು ಗಮನ ಸೆಳೆಯುತ್ತವೆ.</p>.<p>ಮಲೆನಾಡಿನ ಬೆಟ್ಟ ಗುಡ್ಡಗಳ ಮಾದರಿಯ ಜೊತೆಗೆ ಕಣಿವೆಯಲ್ಲಿ ಓಡಾಡುವ ಅತ್ಯಾಧುನಿಕ ವಾಹನಗಳ ಮಾದರಿ ಕೂಡ ವಾಸ್ತವಿಕತೆಗೆ ಹತ್ತಿರವಾಗಿದೆ.</p>.<p>ಪ್ಯಾರಿಸ್ನ ಐಫೆಲ್ ಟವರ್, ಮಲೇಶ್ಯಾದ ಅವಳಿ ಕಟ್ಟಡ, ದುಬೈನ ಬುರ್ಝ್ ಖಲಿಫಾದ ಮಾದರಿಗಳು ಗಮನ ಸೆಳೆಯುತ್ತಿವೆ. 10 ವರ್ಷಗಳಿಂದ ಈ ಬೊಂಬೆ ಪ್ರದರ್ಶನವನ್ನು ನಡೆಸಲಾಗುತ್ತಿದೆ.</p>.<p>ಬಾಲಕೃಷ್ಣ ಭಟ್ ಅವರ ಮಕ್ಕಳು ಮತ್ತು ಕುಟುಂಬಸ್ಥರು ಈ ಬೊಂಬೆ ಪ್ರದರ್ಶನವನ್ನು ಅತ್ಯಂತ ಕಲೆಗಾರಿಕೆಯಿಂದ ಮಾಡಿದ್ದಾರೆ. ಆಸಕ್ತರು ಸಾಯಿ ಮಂದಿರಕ್ಕೆ ಬಂದು ಬೊಂಬೆ ಪ್ರದರ್ಶನ ನೋಡಿ ಆನಂದಿಸಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>