ಹಿರೇಬೈಲಿನಲ್ಲಿ ಅತಿವೃಷ್ಟಿ ಸಂತ್ರಸ್ತರನ್ನು ಬಗಾದಿ ಗೌತಮ್ ಭೇಟಿ ಮಾಡಿದ್ದರು. ಆ ಸಂದರ್ಭದಲ್ಲಿ ಸ್ಥಳೀಯ ವ್ಯಾಪಾರಿ ರವೀಂದ್ರ ಭಟ್ ಎಂಬುವವರು, ಪರಿಹಾರ ಕೇಂದ್ರಕ್ಕೆ ನೀಡಿದ ಪಡಿತರ, ಹಣ ಸಂದಾಯ ಆಗಿಲ್ಲ ಎಂದು ಗಮನ ಸೆಳೆದರು. ಬಗಾದಿ ಗೌತಮ್ ಅವರು ಅಜ್ಜೇಗೌಡರಿಂದ ವಿವರಣೆ ಕೇಳಿದರು. ಉತ್ತರ ಸಮರ್ಪಕವಾಗಿರಲಿಲ್ಲ, ಆಗ ಜಿಲ್ಲಾಧಿಕಾರಿ ಕೋಪಗೊಂಡು ನಿಂದಿಸಿ, ಹೊಡೆಯಲು ಯತ್ನಿಸಿದರು ಎಂದು ಮೂಲಗಳು ತಿಳಿಸಿವೆ.