ಬಸ್ ನಿಲ್ದಾಣದ ಒಳಗಿರುವ ಹೋಟೆಲ್ನಿಂದ ಹೊರಬರುವ ತ್ಯಾಜ್ಯದ ನೀರು ಚರಂಡಿಗೆ ಹೋಗದೆ, ವಾಹನ ನಿಲುಗಡೆ ಪ್ರದೇಶದ ಸಮೀಪದಲ್ಲಿರುವ ಚೇಂಬರ್ನಿಂದ ಹೊರಗೆ ಹರಿದು ಸುತ್ತೆಲ್ಲ ಗಲೀಜಾಗಿದೆ. ಈ ನೀರಿನಲ್ಲಿ ಹೋಟೆಲ್ ತಿಂಡಿ ಚೂರು, ಅನ್ನವೂ ತೇಲುತ್ತಿರುತ್ತದೆ. ಜನರು ಅದನ್ನು ತುಳಿದುಕೊಂಡೇ ಹೋಗುವ ಅನಿವಾರ್ಯತೆಯಿದೆ.