ತಾಲ್ಲೂಕಿನ ನರಸೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಈ ಶಾಲೆಯ ಚಾವಣಿಯ ಪಕಾಸು, ರೀಪು, ಕಿಟಕಿ, ಬಾಗಿಲುಗಳಿಗೂ ಗೆದ್ದಲು ಹಿಡಿದಿದೆ. ಗೋಡೆಗೆ ಮೆತ್ತಿದ್ದ ಗಾರೆ ಕಿತ್ತು ಬರುತ್ತಿದೆ, ಬಿರುಕು ಬಿಟ್ಟಿದೆ. ಮೇಲ್ನೋಟಕ್ಕೆ ಎಲ್ಲವೂ ಸರಿ ಇದೆ ಎಂಬಂತೆ ಕಾಣುವ ಶಾಲೆಯ ಒಳಗೆ ಪ್ರವೇಶಿಸಿದಾಗಲೇ ನಿಜ ಸ್ಥಿತಿ ಅರಿವಾಗುತ್ತದೆ.