ಬಾಳೆಹೊನ್ನೂರು ಸಮೀಪದ ಹಲಸೂರು ಎಂಬಲ್ಲಿ ರಾಮೇಗೌಡ ಮೃತಪಟ್ಟಿದ್ದರು. ಮೃತರ ಅಂತಿಮ ದರ್ಶನಕ್ಕೆ ಹೊರಟ ಅವರ ಅಳಿಯ, ಆಡುವಳ್ಳಿ ಮೂಲದ ಹ್ಯಾರಂಬಿ ನಿವಾಸಿ ಸುರೇಶ್, ಅವರ ಪತ್ನಿ ಹಾಗೂ ಮಗ ಹುಣಸೆಹಳ್ಳಿಯಲ್ಲಿ ಬಸ್ಗಾಗಿ ಕಾಯುತ್ತಿದ್ದರು. ಆ ವೇಳೆ ಬಾಳೆಹೊನ್ನೂರು ಕಡೆಯಿಂದ ಅತಿವೇಗದಿಂದ ಬಂದ ಕಾರು ರಸ್ತೆಯಿಂದ ಅನತಿ ದೂರದಲ್ಲಿ ನಿಂತಿದ್ದ ಸುರೇಶ್ಗೆ (50) ಡಿಕ್ಕಿ ಹೊಡೆದು ಸುಮಾರು 40 ಅಡಿಗಳಷ್ಟು ದೂರಕ್ಕೆ ಎಳೆದೊಯ್ದಿತು. ಕೂದಲೆಳೆಯ ಅಂತರದಲ್ಲಿ ತಾಯಿ– ಮಗ ಪಾರಾದರು. ಆದರೆ, ಗಂಭೀರ ಗಾಯಗೊಂಡ ಸುರೇಶ್ ಪತ್ನಿ, ಮಗನ ಎದುರಲ್ಲೇ ಮೃತಪಟ್ಟರು.