<p><strong>ಕಳಸ:</strong> ಹೆಬ್ಬೊಳೆ ಸೇತುವೆ ಕಾಮಗಾರಿ ಕಾರಣಕ್ಕೆ ಈ ರಸ್ತೆಯಲ್ಲಿ ಸಂಚಾರ ನಿಲ್ಲಿಸಿ ಎರಡು ತಿಂಗಳುಗಳು ಕಳೆದಿವೆ. ಹೀಗಾಗಿ, ಹಳುವಳ್ಳಿ- ಹೊರನಾಡು ಪರ್ಯಾಯ ರಸ್ತೆಯಲ್ಲಿ ವಾಹನಗಳು ಸಂಚರಿಸುತ್ತಿವೆ. ಆದರೆ, ಈ ರಸ್ತೆಯ ಇಕ್ಕಟ್ಟಾದ ತಿರುವುಗಳು ವಾಹನ ಸಂಚಾರಕ್ಕೆ ತೊಡಕಾಗಿವೆ.</p>.<p>ಏ.25ರವರೆಗೆ ಹೆಬ್ಬೊಳೆ ರಸ್ತೆಯಲ್ಲಿ ಸಂಚಾರ ನಿರ್ಬಂಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಆದರೆ ಈ ಸೇತುವೆಯ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿದ್ದು ಮುಂದಿನ ವಾರ ಮುಗಿಯುವುದು ಅನುಮಾನ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.</p>.<p>ಮಕ್ಕಳ ಬೇಸಿಗೆ ರಜೆ ಪ್ರಾರಂಭವಾಗಿರುವ ಕಾರಣಕ್ಕೆ ಹೊರನಾಡಿನ ಅನ್ನಪೂರ್ಣೇಶ್ವರಿ ದರ್ಶನಕ್ಕೆ ಪ್ರವಾಸಿಗರು ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿದ್ದಾರೆ. ಪ್ರತಿದಿನವೂ ನೂರಾರು ಪ್ರವಾಸಿ ವಾಹನಗಳು ಕಳಸ, ಹಳುವಳ್ಳಿ ಮೂಲಕ ಹೊರನಾಡಿಗೆ ಸಾಗಿ ಅಲ್ಲಿಂದ ಶೃಂಗೇರಿಗೆ ಹೋಗುತ್ತಿವೆ.</p>.<p>ಆದರೆ, ಹಳುವಳ್ಳಿ-ದಾರಿಮನೆ ನಡುವಿನ 8 ಕಿ.ಮೀ ರಸ್ತೆ ಅತ್ಯಂತ ಇಕ್ಕಟ್ಟಾಗಿದೆ. ಈ ರಸ್ತೆಯಲ್ಲಿ ಅನೇಕ ತಿರುವುಗಳು ಇದ್ದು ಅಪಾಯಕಾರಿಯಾಗಿವೆ. ಎರಡು ತಿಂಗಳುಗಳಲ್ಲಿ ಅನೇಕ ಸಣ್ಣ ಅಪಘಾತಗಳು ಸಂಭವಿಸಿದ್ದು ರಸ್ತೆ ಮಧ್ಯೆ ಪ್ರವಾಸಿಗರ ಘರ್ಷಣೆ ಮಾಮೂಲಿ ದೃಶ್ಯವಾಗಿದೆ.</p>.<p>ಇದರ ಜೊತೆಗೆ, ಈ ರಸ್ತೆಯ ಪಕ್ಕದಲ್ಲಿ ಅಲ್ಲಲ್ಲಿ ಪ್ರಪಾತಗಳು ಇವೆ. ಕೆಲವು ಕಡೆ ಚರಂಡಿಗಳು ಕೂಡ ರಸ್ತೆಗೆ ತೆರೆದುಕೊಂಡಿವೆ. ಒಂದೇ ವಾಹನ ಸಾಗಬಹುದಾದ ಈ ರಸ್ತೆಯಲ್ಲಿ ಎದುರಿನಿಂದ ಹತ್ತಾರು ವಾಹನಗಳು ಬಂದಾಗ ಸಾಗಲು ಸ್ಥಳ ಇಲ್ಲದೆ ಸಂಚಾರಕ್ಕೆ ಅಡಚಣೆ ಆಗುತ್ತಿದೆ.</p>.<p>ಹೊರನಾಡಿನಿಂದ ಹಳುವಳ್ಳಿ ಮೂಲಕ ಬಾಳೆಹೊನ್ನೂರು, ಬಸರೀಕಟ್ಟೆ, ಕೊಪ್ಪದ ಕಡೆಗೆ ತಲುಪಲು ಈ ರಸ್ತೆ ಸಂಚಾರ ಸನಿಹ. ಆದರೆ ಬಹಳ ಕಾಲ ನಿರ್ವಹಣೆ ಮತ್ತು ವಿಸ್ತರಣೆ ಮಾಡದೆ ಇರುವುದರಿಂದ ರಸ್ತೆ ಮೂಲ ಸ್ವರೂಪ ಕಳೆದುಕೊಂಡಿದೆ.</p>.<p>ಈ ರಸ್ತೆಯನ್ನು ವಿಸ್ತರಿಸಿ, ತಿರುವುಗಳನ್ನು ಕಡಿಮೆ ಮಾಡಿದರೆ ಅನುಕೂಲ ಆಗುತ್ತದೆ. ಈ ರಸ್ತೆಯಲ್ಲಿ ವರ್ಷವಿಡೀ ಬಸ್ ಸಂಚಾರ ನಡೆದರೆ ಇಲ್ಲಿ ಕೃಷಿಕರಿಗೆ, ಶಾಲಾ ಮಕ್ಕಳಿಗೂ ಅನುಕೂಲ ಆಗುತ್ತದೆ. ಆದರೆ ಈ ಬಗ್ಗೆ ಸಂಬಂಧಪಟ್ಟವರಿಗೆ ಆಸಕ್ತಿಯೇ ಇಲ್ಲ ಎಂದು ಗ್ರಾಮಸ್ಥ ಅನಿಲ್ ಮುಜೇಕಾನು ಬೇಸರಿಸಿದರು.</p>.<blockquote>ಕಿರಿದಾದ ರಸ್ತೆಯಲ್ಲಿ ಸಂಚಾರವೇ ಸವಾಲು ರಸ್ತೆ ಮಧ್ಯೆ ಪ್ರವಾಸಿಗರ ಘರ್ಷಣೆ ರಸ್ತೆಯ ಪಕ್ಕದಲ್ಲಿ ಅಲ್ಲಲ್ಲಿ ಪ್ರಪಾತ</blockquote>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಳಸ:</strong> ಹೆಬ್ಬೊಳೆ ಸೇತುವೆ ಕಾಮಗಾರಿ ಕಾರಣಕ್ಕೆ ಈ ರಸ್ತೆಯಲ್ಲಿ ಸಂಚಾರ ನಿಲ್ಲಿಸಿ ಎರಡು ತಿಂಗಳುಗಳು ಕಳೆದಿವೆ. ಹೀಗಾಗಿ, ಹಳುವಳ್ಳಿ- ಹೊರನಾಡು ಪರ್ಯಾಯ ರಸ್ತೆಯಲ್ಲಿ ವಾಹನಗಳು ಸಂಚರಿಸುತ್ತಿವೆ. ಆದರೆ, ಈ ರಸ್ತೆಯ ಇಕ್ಕಟ್ಟಾದ ತಿರುವುಗಳು ವಾಹನ ಸಂಚಾರಕ್ಕೆ ತೊಡಕಾಗಿವೆ.</p>.<p>ಏ.25ರವರೆಗೆ ಹೆಬ್ಬೊಳೆ ರಸ್ತೆಯಲ್ಲಿ ಸಂಚಾರ ನಿರ್ಬಂಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಆದರೆ ಈ ಸೇತುವೆಯ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿದ್ದು ಮುಂದಿನ ವಾರ ಮುಗಿಯುವುದು ಅನುಮಾನ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.</p>.<p>ಮಕ್ಕಳ ಬೇಸಿಗೆ ರಜೆ ಪ್ರಾರಂಭವಾಗಿರುವ ಕಾರಣಕ್ಕೆ ಹೊರನಾಡಿನ ಅನ್ನಪೂರ್ಣೇಶ್ವರಿ ದರ್ಶನಕ್ಕೆ ಪ್ರವಾಸಿಗರು ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿದ್ದಾರೆ. ಪ್ರತಿದಿನವೂ ನೂರಾರು ಪ್ರವಾಸಿ ವಾಹನಗಳು ಕಳಸ, ಹಳುವಳ್ಳಿ ಮೂಲಕ ಹೊರನಾಡಿಗೆ ಸಾಗಿ ಅಲ್ಲಿಂದ ಶೃಂಗೇರಿಗೆ ಹೋಗುತ್ತಿವೆ.</p>.<p>ಆದರೆ, ಹಳುವಳ್ಳಿ-ದಾರಿಮನೆ ನಡುವಿನ 8 ಕಿ.ಮೀ ರಸ್ತೆ ಅತ್ಯಂತ ಇಕ್ಕಟ್ಟಾಗಿದೆ. ಈ ರಸ್ತೆಯಲ್ಲಿ ಅನೇಕ ತಿರುವುಗಳು ಇದ್ದು ಅಪಾಯಕಾರಿಯಾಗಿವೆ. ಎರಡು ತಿಂಗಳುಗಳಲ್ಲಿ ಅನೇಕ ಸಣ್ಣ ಅಪಘಾತಗಳು ಸಂಭವಿಸಿದ್ದು ರಸ್ತೆ ಮಧ್ಯೆ ಪ್ರವಾಸಿಗರ ಘರ್ಷಣೆ ಮಾಮೂಲಿ ದೃಶ್ಯವಾಗಿದೆ.</p>.<p>ಇದರ ಜೊತೆಗೆ, ಈ ರಸ್ತೆಯ ಪಕ್ಕದಲ್ಲಿ ಅಲ್ಲಲ್ಲಿ ಪ್ರಪಾತಗಳು ಇವೆ. ಕೆಲವು ಕಡೆ ಚರಂಡಿಗಳು ಕೂಡ ರಸ್ತೆಗೆ ತೆರೆದುಕೊಂಡಿವೆ. ಒಂದೇ ವಾಹನ ಸಾಗಬಹುದಾದ ಈ ರಸ್ತೆಯಲ್ಲಿ ಎದುರಿನಿಂದ ಹತ್ತಾರು ವಾಹನಗಳು ಬಂದಾಗ ಸಾಗಲು ಸ್ಥಳ ಇಲ್ಲದೆ ಸಂಚಾರಕ್ಕೆ ಅಡಚಣೆ ಆಗುತ್ತಿದೆ.</p>.<p>ಹೊರನಾಡಿನಿಂದ ಹಳುವಳ್ಳಿ ಮೂಲಕ ಬಾಳೆಹೊನ್ನೂರು, ಬಸರೀಕಟ್ಟೆ, ಕೊಪ್ಪದ ಕಡೆಗೆ ತಲುಪಲು ಈ ರಸ್ತೆ ಸಂಚಾರ ಸನಿಹ. ಆದರೆ ಬಹಳ ಕಾಲ ನಿರ್ವಹಣೆ ಮತ್ತು ವಿಸ್ತರಣೆ ಮಾಡದೆ ಇರುವುದರಿಂದ ರಸ್ತೆ ಮೂಲ ಸ್ವರೂಪ ಕಳೆದುಕೊಂಡಿದೆ.</p>.<p>ಈ ರಸ್ತೆಯನ್ನು ವಿಸ್ತರಿಸಿ, ತಿರುವುಗಳನ್ನು ಕಡಿಮೆ ಮಾಡಿದರೆ ಅನುಕೂಲ ಆಗುತ್ತದೆ. ಈ ರಸ್ತೆಯಲ್ಲಿ ವರ್ಷವಿಡೀ ಬಸ್ ಸಂಚಾರ ನಡೆದರೆ ಇಲ್ಲಿ ಕೃಷಿಕರಿಗೆ, ಶಾಲಾ ಮಕ್ಕಳಿಗೂ ಅನುಕೂಲ ಆಗುತ್ತದೆ. ಆದರೆ ಈ ಬಗ್ಗೆ ಸಂಬಂಧಪಟ್ಟವರಿಗೆ ಆಸಕ್ತಿಯೇ ಇಲ್ಲ ಎಂದು ಗ್ರಾಮಸ್ಥ ಅನಿಲ್ ಮುಜೇಕಾನು ಬೇಸರಿಸಿದರು.</p>.<blockquote>ಕಿರಿದಾದ ರಸ್ತೆಯಲ್ಲಿ ಸಂಚಾರವೇ ಸವಾಲು ರಸ್ತೆ ಮಧ್ಯೆ ಪ್ರವಾಸಿಗರ ಘರ್ಷಣೆ ರಸ್ತೆಯ ಪಕ್ಕದಲ್ಲಿ ಅಲ್ಲಲ್ಲಿ ಪ್ರಪಾತ</blockquote>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>