<p><strong>ಸಾತ್ಕೋಳಿ</strong>(ಎನ್.ಆರ್.ಪುರ): ತಾಲ್ಲೂಕಿನ ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾತ್ಕೋಳಿಯ ಗ್ರಾಮದ ಹಳ್ಳದಲ್ಲಿ ಬುಧವಾರ ಸಂಜೆ ಭಾರಿ ಮಳೆಗೆ 2 ಹಸುಗಳು ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿವೆ. </p>.<p>ಸಾತ್ಕೋಳಿ ಮಾರ್ಗ ಮಧ್ಯೆ ಹಳ್ಳ ಸಿಗುತ್ತದೆ. ಈ ಹಳ್ಳಕ್ಕೆ ಸಣ್ಣ ಪೈಪ್ ಹಾಕಿ ಮೋರಿ ನಿರ್ಮಿಸಲಾಗಿದೆ. ಧಾರಾಕಾರ ಮಳೆಯಿಂದ ನೀರು ಉಕ್ಕಿ ರಸ್ತೆಯ ಮೇಲೆ ಹರಿದು, ರಸ್ತೆಯ ಮೇಲಿನಿಂದ ಬರುತ್ತಿದ್ದ ಸಾತ್ಕೋಳಿ ಗ್ರಾಮದ ನಾಗೇಶ ಮತ್ತು ನಾಗರತ್ನಾ ಎಂಬುವರಿಗೆ ಸೇರಿದ ಹಸುಗಳು ನೀರಿನಲ್ಲಿ ತೇಲಿಕೊಂಡು ಹೋಗಿವೆ.</p>.<p>ಇದೇ ಹಳ್ಳದಲ್ಲಿ ಕೆಲವು ವರ್ಷಗಳ ಹಿಂದೆ ಮಳೆಗಾಲದಲ್ಲಿ ಕಾರು ಕೊಚ್ಚಿಕೊಂಡು ಹೋಗಿ ಒಬ್ಬರು ಮೃತ ಪಟ್ಟಿದ್ದರು. ಹಲವು ವರ್ಷಗಳಿಂದ ಹಳ್ಳಕ್ಕೆ ದೊಡ್ಡ ಸೇತುವೆ ನಿರ್ಮಿಸಿಕೊಡುವಂತೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಸೇತುವೆ ನಿರ್ಮಾಣವಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು. </p>.<p><strong>ಅಡಿಕೆ, ಭತ್ತಕ್ಕೆ ಹಾನಿ</strong>: </p><p>ಮಳೆಯಿಂದಾಗಿ ಗ್ರಾಮದ ರಾಮಣ್ಣ, ಗಂಗಣ್ಣ, ಪುಟ್ಟಸ್ವಾಮಿ, ಲಿಂಗಣ್ಣ ಮುಂತಾದವರ ಅಡಿಕೆ ತೋಟಕ್ಕೆ ನೀರು ನುಗ್ಗಿದೆ. ಮಂಜುನಾಥ, ನಾಗರತ್ನಾ, ನಾಗಪ್ಪ, ಕೃಷ್ಣಪ್ಪ ಎಂಬುವರ ಗದ್ದೆಗಳಿಗೆ ಕೆಸರು ನೀರು ನುಗ್ಗಿ ಭತ್ತದ ಪೈರು ಹಾಳಾಗಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಾತ್ಕೋಳಿ</strong>(ಎನ್.ಆರ್.ಪುರ): ತಾಲ್ಲೂಕಿನ ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾತ್ಕೋಳಿಯ ಗ್ರಾಮದ ಹಳ್ಳದಲ್ಲಿ ಬುಧವಾರ ಸಂಜೆ ಭಾರಿ ಮಳೆಗೆ 2 ಹಸುಗಳು ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿವೆ. </p>.<p>ಸಾತ್ಕೋಳಿ ಮಾರ್ಗ ಮಧ್ಯೆ ಹಳ್ಳ ಸಿಗುತ್ತದೆ. ಈ ಹಳ್ಳಕ್ಕೆ ಸಣ್ಣ ಪೈಪ್ ಹಾಕಿ ಮೋರಿ ನಿರ್ಮಿಸಲಾಗಿದೆ. ಧಾರಾಕಾರ ಮಳೆಯಿಂದ ನೀರು ಉಕ್ಕಿ ರಸ್ತೆಯ ಮೇಲೆ ಹರಿದು, ರಸ್ತೆಯ ಮೇಲಿನಿಂದ ಬರುತ್ತಿದ್ದ ಸಾತ್ಕೋಳಿ ಗ್ರಾಮದ ನಾಗೇಶ ಮತ್ತು ನಾಗರತ್ನಾ ಎಂಬುವರಿಗೆ ಸೇರಿದ ಹಸುಗಳು ನೀರಿನಲ್ಲಿ ತೇಲಿಕೊಂಡು ಹೋಗಿವೆ.</p>.<p>ಇದೇ ಹಳ್ಳದಲ್ಲಿ ಕೆಲವು ವರ್ಷಗಳ ಹಿಂದೆ ಮಳೆಗಾಲದಲ್ಲಿ ಕಾರು ಕೊಚ್ಚಿಕೊಂಡು ಹೋಗಿ ಒಬ್ಬರು ಮೃತ ಪಟ್ಟಿದ್ದರು. ಹಲವು ವರ್ಷಗಳಿಂದ ಹಳ್ಳಕ್ಕೆ ದೊಡ್ಡ ಸೇತುವೆ ನಿರ್ಮಿಸಿಕೊಡುವಂತೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಸೇತುವೆ ನಿರ್ಮಾಣವಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು. </p>.<p><strong>ಅಡಿಕೆ, ಭತ್ತಕ್ಕೆ ಹಾನಿ</strong>: </p><p>ಮಳೆಯಿಂದಾಗಿ ಗ್ರಾಮದ ರಾಮಣ್ಣ, ಗಂಗಣ್ಣ, ಪುಟ್ಟಸ್ವಾಮಿ, ಲಿಂಗಣ್ಣ ಮುಂತಾದವರ ಅಡಿಕೆ ತೋಟಕ್ಕೆ ನೀರು ನುಗ್ಗಿದೆ. ಮಂಜುನಾಥ, ನಾಗರತ್ನಾ, ನಾಗಪ್ಪ, ಕೃಷ್ಣಪ್ಪ ಎಂಬುವರ ಗದ್ದೆಗಳಿಗೆ ಕೆಸರು ನೀರು ನುಗ್ಗಿ ಭತ್ತದ ಪೈರು ಹಾಳಾಗಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>