ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೇನುಹುಳು ಕಡಿತಕ್ಕೆ ವ್ಯಕ್ತಿ ಸಾವು

Last Updated 28 ನವೆಂಬರ್ 2022, 7:34 IST
ಅಕ್ಷರ ಗಾತ್ರ

ಬೀರೂರು: ಇಲ್ಲಿನ ಲಿಂಗದಹಳ್ಳಿ ರಸ್ತೆಯ ತೋಟದಲ್ಲಿ ದಂಪತಿ ಮೇಲೆ ಜೇನುಹುಳುಗಳು ದಾಳಿ ನಡೆಸಿದ್ದು, ಪತಿ ಪಟ್ಟಣದ ಭಾಗವತ್ ನಗರ ಬಡಾವಣೆಯ ಕುಬೇರಪ್ಪ (55) ಮೃತಪಟ್ಟಿದ್ದಾರೆ. ಪತ್ನಿ ಪಾರಾಗಿದ್ದಾರೆ.

ಕುಬೇರಪ್ಪ ಮತ್ತು ಪತ್ನಿ ಸುಧಾ ಇಬ್ಬರು ತೋಟದ ಕೆಲಸಕ್ಕೆಂದು ತೆರಳಿದ್ದರು. ಕೆಲಸ ಮಾಡುತ್ತಿರುವಾಗ ಜೇನುಹುಳುಗಳು ಏಕಾಏಕಿ ದಾಳಿ ನಡೆಸಿವೆ. ಪತ್ನಿಯ ಮುಖಕ್ಕೆ ದಾಳಿ ನಡೆಸಿದ್ದರೂ ಆಕೆ ತಪ್ಪಿಸಿಕೊಂಡು ತೋಟದಿಂದ ಹೊರಗೆ ಓಡಿಹೋದ ಪರಿಣಾಮ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೀರೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ದೇಹವನ್ನು ಸಂಬಂಧಪಟ್ಟವರಿಗೆ ಹಸ್ತಾಂತರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT