‘ವಚನಕಾರರ ಜ್ಞಾನದ ಮಟ್ಟ ವಿಶ್ವವಿದ್ಯಾಲಯಕ್ಕಿಂತ ಹೆಚ್ಚಿತ್ತು ಎಂಬುದು ಉತ್ಪ್ರೇಕ್ಷೆಯಲ್ಲ. ಜೀವನಾನುಭವವನ್ನು ವಚನಗಳ ಮೂಲಕ ಹೇಳಿ ಸಮಾಜದ ಓರೆ ಕೋರೆಗಳನ್ನು ತಿದ್ದುವ ಪ್ರಯತ್ನ ಮಾಡಿದರು. ಆ ಪರಂಪರೆ ಮತ್ತೆ ಪುನರುಜ್ಜೀವನಗೊಳ್ಳಬೇಕೆಂಬ ಆಶಯದ ಫಲವೇ ಮತ್ತೆ ಕಲ್ಯಾಣ ಕಾರ್ಯಕ್ರಮ. ವಚನಕಾರರು, ಶರಣರು ಸಾರಿದ ಸಮಾನತೆಯ ಸಂದೇಶಗಳ ಸಾಕಾರವಾಗಬೇಕು, ಸಾರ್ವಜನಿಕರಲ್ಲಿ, ಮಕ್ಕಳಲ್ಲಿ ಸಂಸ್ಕೃತಿಯ ಪರಿಚಯ ಮತ್ತು ಸಂಸ್ಕಾರ ಮೂಡಿಸಬೇಕೆಂಬ ಚಿಂತನೆಯಿಂದ ಈ ಕಾರ್ಯಕ್ರಮ ರೂಪಿತಗೊಂಡಿತು’ ಎಂದು ಅವರು ವಿವರಿಸಿದರು