ಈ ಬಗ್ಗೆ ಲೊಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಮಂಜುನಾಥ್ ಅವರನ್ನು ಪ್ರಶ್ನಿಸಿದಾಗ ಅವರು, ‘15 ದಿನದ ಹಿಂದಷ್ಟೇ ನಿರ್ಮಾಣ ಆದ ತಡೆಗೋಡೆ ಮೇಲೆ ಅತಿಹೆಚ್ಚು ಮಣ್ಣನ್ನು ಹೇರಿದ್ದರಿಂದ ತಡೆಗೋಡೆ ಕುಸಿದಿರಬಹುದು. ಗುತ್ತಿಗೆದಾರರಿಗೆ ಈವರೆಗೆ ಹಣ ಪಾವತಿ ಮಾಡಿಲ್ಲ. ತಡೆಗೋಡೆ ಪುನರ್ ನಿರ್ಮಾಣ ಮಾಡಿಸುತ್ತೇವೆ’ ಎಂದರು.