ಚಿಕ್ಕಮಗಳೂರು: ಜಿಲ್ಲೆಯಾದ್ಯಂತ ಬಿರುಸಿನ ಮಳೆ, ಮೈದುಂಬಿ ಹರಿಯುತ್ತಿದೆ ತುಂಗಾ ನದಿ

ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ರಾತ್ರಿ ಬಿರುಸಾಗಿ ಮಳೆಯಾಗಿದೆ. ನದಿ, ಹಳ್ಳ, ಝರಿಗಳು ಮೈದುಂಬಿಕೊಂಡಿವೆ.
ತುಂಗಾ ನದಿ ಮೈದುಂಬಿಕೊಂಡು ಹರಿಯುತ್ತಿದೆ. ಗಿರಿ ಶ್ರೇಣಿ ಭಾಗದಲ್ಲಿ ಹಳ್ಳ, ಝರಿಗಳಲ್ಲಿ ಹರಿವಿನ ಪ್ರಮಾಣ ಹೆಚ್ಚಾಗಿದೆ.
ಕೊಪ್ಪ, ಶೃಂಗೇರಿ, ಮೂಡಿಗೆರೆ, ಚಿಕ್ಕಮಗಳೂರು, ತರೀಕೆರೆ ಭಾಗದಲ್ಲಿ ಉತ್ತಮ ಮಳೆಯಾಗಿದೆ. ಕೃಷಿ ಚಟುವಟಿಕೆಗಳು ಗರಿಗೆದರಿವೆ.
ಕಿಗ್ಗಾ 17.4, ಶೃಂಗೇರಿ– 136. 2, ಕೆರೆಕಟ್ಟೆ– 12.9, ಜಯಪುರ– 12.3, ಬಸ್ರೀಕಟ್ಟೆ– 9.7, ಕೊಟ್ಟಿಗೆಹಾರ– 8.2 ಸೆಂ.ಮೀ ಮಳೆಯಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಶನಿವಾರ ರಾತ್ರಿ ಬಿರುಸಾಗಿ ಮಳೆಯಾಗಿದೆ. ನದಿ, ಹಳ್ಳ, ಝರಿಗಳು ಮೈದುಂಬಿಕೊಂಡಿವೆ. ತುಂಗಾ ನದಿ ಮೈದುಂಬಿಕೊಂಡು ಹರಿಯುತ್ತಿದೆ.#Rain #Monsoon #Chikmagaluru pic.twitter.com/trXIcHQmjM
— Prajavani (@prajavani) July 3, 2022
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.