ಬೇಸಿಗೆಯಲ್ಲಿ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ಇಲ್ಲಿನ ಕೃಷ್ಣ ರಾಜೇಂದ್ರ ಗಿರಿಧಾಮವನ್ನು 1932ರಲ್ಲಿ ಅಂದಿನ ಮೈಸೂರು ಸಂಸ್ಥಾನದ ಅರಸ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ರವರು ಆರಂಭಿಸಿದ್ದರು. ಮೈಸೂರು ಸಂಸ್ಥಾನವು ಈ ಗಿರಿಧಾಮವನ್ನು1942ರಲ್ಲಿ ತೋಟಗಾರಿಕೆ ಇಲಾಖೆ ಅಧೀನಕ್ಕೆ ನೀಡಿ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಿತ್ತು. ಅಲ್ಲಿಂದ ಇಲ್ಲಿಯವರೆಗೆ 78 ವರ್ಷಗಳ ಕಾಲ ಗಿರಿಧಾಮಕ್ಕೆ ಜನಸಾಮಾನ್ಯರು ಭೇಟಿ ನೀಡುತ್ತಿದ್ದರು.