<p>ತರೀಕೆರೆ: ಜಿಲ್ಲೆಯ ಪ್ರವಾಸಿ ತಾಣ ಕೆಮ್ಮಣ್ಣುಗುಂಡಿ ಶ್ರೀಕೃಷ್ಣ ರಾಜೇಂದ್ರ ಗಿರಿಧಾಮವನ್ನು ಪ್ರವಾಸೋದ್ಯಮ ಇಲಾಖೆಗೆ ಸೇರಿಸುವ ಪ್ರಸ್ತಾವ ಸರ್ಕಾರದ ಮುಂದಿದ್ದು, ಇದನ್ನು ವಿರೋಧಿಸುವುದಾಗಿ ಪ್ರವಾಸಿಗರು ಹಾಗೂ ಪರಿಸರವಾದಿಗಳು ತಿಳಿಸಿದ್ದಾರೆ.</p>.<p>ಬೇಸಿಗೆಯಲ್ಲಿ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ಇಲ್ಲಿನ ಕೃಷ್ಣ ರಾಜೇಂದ್ರ ಗಿರಿಧಾಮವನ್ನು 1932ರಲ್ಲಿ ಅಂದಿನ ಮೈಸೂರು ಸಂಸ್ಥಾನದ ಅರಸ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ರವರು ಆರಂಭಿಸಿದ್ದರು. ಮೈಸೂರು ಸಂಸ್ಥಾನವು ಈ ಗಿರಿಧಾಮವನ್ನು1942ರಲ್ಲಿ ತೋಟಗಾರಿಕೆ ಇಲಾಖೆ ಅಧೀನಕ್ಕೆ ನೀಡಿ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಿತ್ತು. ಅಲ್ಲಿಂದ ಇಲ್ಲಿಯವರೆಗೆ 78 ವರ್ಷಗಳ ಕಾಲ ಗಿರಿಧಾಮಕ್ಕೆ ಜನಸಾಮಾನ್ಯರು ಭೇಟಿ ನೀಡುತ್ತಿದ್ದರು.</p>.<p>‘ಈ ಗಿರಿಧಾಮವನ್ನು ತೋಟಗಾರಿಕೆ ಇಲಾಖೆಯಿಂದ ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರಿಸಲು ಸರ್ಕಾರ ಮುಂದಾಗಿರುವ ಕ್ರಮವನ್ನು ವಿರೋಧಿಸುತ್ತೇವೆ’ ಎಂದು ನಂದಿಬಟ್ಟಲು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೃಷ್ಣೆಗೌಡ ಹೇಳಿದ್ದಾರೆ.</p>.<p>ಗಿರಿಧಾಮವು ಪ್ರವಾಸೋಧ್ಯಮ ಇಲಾಖೆಗೆ ಸೇರ್ಪಡೆಯಾದರೆ ಬಡ ಪ್ರವಾಸಿಗರು ಬಂದು ಹೋಗುವಂತಿಲ್ಲ. ಶ್ರೀಮಂತರಿಗಷ್ಟೆ ಗಿರಿಧಾಮವಾಗಲಿದೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ ಲಿಂಗದಹಳ್ಳಿಯ ಅಬೂಬಕ್ಕರ್.</p>.<p>‘ಪ್ರವಾಸಿಗರಿಂದ ಸಾಕಷ್ಟು ಆದಾಯವಿದೆ. ಬಡವರ ಊಟಿಯಾಗಿರುವ ಗಿರಿಧಾಮ ಮೂಲ ಇಲಾಖೆಯಲ್ಲಿ ಉಳಿದರೆ ಒಳ್ಳೆಯದು’ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಅಧಿಕಾರಿ ಯತಿರಾಜ್.</p>.<p>‘ಪ್ರವಾಸೋದ್ಯಮ ಇಲಾಖೆ ಸುಪರ್ದಿಗೆ ಗಿರಿಧಾಮ ಹೋದರೆ ಐಷರಾಮಿ ಕಟ್ಟಡಗಳು ತಲೆಯೆತ್ತಲಿದ್ದು, ಪ್ರಾಚೀನ ಗಿಡ ಮೂಲಿಕೆಗಳು ಹಾಗೂ ವಿವಿಧ ಪ್ರಬೇಧದ ಪಕ್ಷಿ ಸಂಕುಲಗಳು ನಾಶ ಹೊಂದಲಿವೆ’ ಎಂಬುದು ಇಲ್ಲಿನ ಪರಿಸರವಾದಿಗಳ ಅಭಿಪ್ರಾಯ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ತರೀಕೆರೆ: ಜಿಲ್ಲೆಯ ಪ್ರವಾಸಿ ತಾಣ ಕೆಮ್ಮಣ್ಣುಗುಂಡಿ ಶ್ರೀಕೃಷ್ಣ ರಾಜೇಂದ್ರ ಗಿರಿಧಾಮವನ್ನು ಪ್ರವಾಸೋದ್ಯಮ ಇಲಾಖೆಗೆ ಸೇರಿಸುವ ಪ್ರಸ್ತಾವ ಸರ್ಕಾರದ ಮುಂದಿದ್ದು, ಇದನ್ನು ವಿರೋಧಿಸುವುದಾಗಿ ಪ್ರವಾಸಿಗರು ಹಾಗೂ ಪರಿಸರವಾದಿಗಳು ತಿಳಿಸಿದ್ದಾರೆ.</p>.<p>ಬೇಸಿಗೆಯಲ್ಲಿ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ಇಲ್ಲಿನ ಕೃಷ್ಣ ರಾಜೇಂದ್ರ ಗಿರಿಧಾಮವನ್ನು 1932ರಲ್ಲಿ ಅಂದಿನ ಮೈಸೂರು ಸಂಸ್ಥಾನದ ಅರಸ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ರವರು ಆರಂಭಿಸಿದ್ದರು. ಮೈಸೂರು ಸಂಸ್ಥಾನವು ಈ ಗಿರಿಧಾಮವನ್ನು1942ರಲ್ಲಿ ತೋಟಗಾರಿಕೆ ಇಲಾಖೆ ಅಧೀನಕ್ಕೆ ನೀಡಿ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಿತ್ತು. ಅಲ್ಲಿಂದ ಇಲ್ಲಿಯವರೆಗೆ 78 ವರ್ಷಗಳ ಕಾಲ ಗಿರಿಧಾಮಕ್ಕೆ ಜನಸಾಮಾನ್ಯರು ಭೇಟಿ ನೀಡುತ್ತಿದ್ದರು.</p>.<p>‘ಈ ಗಿರಿಧಾಮವನ್ನು ತೋಟಗಾರಿಕೆ ಇಲಾಖೆಯಿಂದ ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರಿಸಲು ಸರ್ಕಾರ ಮುಂದಾಗಿರುವ ಕ್ರಮವನ್ನು ವಿರೋಧಿಸುತ್ತೇವೆ’ ಎಂದು ನಂದಿಬಟ್ಟಲು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೃಷ್ಣೆಗೌಡ ಹೇಳಿದ್ದಾರೆ.</p>.<p>ಗಿರಿಧಾಮವು ಪ್ರವಾಸೋಧ್ಯಮ ಇಲಾಖೆಗೆ ಸೇರ್ಪಡೆಯಾದರೆ ಬಡ ಪ್ರವಾಸಿಗರು ಬಂದು ಹೋಗುವಂತಿಲ್ಲ. ಶ್ರೀಮಂತರಿಗಷ್ಟೆ ಗಿರಿಧಾಮವಾಗಲಿದೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ ಲಿಂಗದಹಳ್ಳಿಯ ಅಬೂಬಕ್ಕರ್.</p>.<p>‘ಪ್ರವಾಸಿಗರಿಂದ ಸಾಕಷ್ಟು ಆದಾಯವಿದೆ. ಬಡವರ ಊಟಿಯಾಗಿರುವ ಗಿರಿಧಾಮ ಮೂಲ ಇಲಾಖೆಯಲ್ಲಿ ಉಳಿದರೆ ಒಳ್ಳೆಯದು’ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಅಧಿಕಾರಿ ಯತಿರಾಜ್.</p>.<p>‘ಪ್ರವಾಸೋದ್ಯಮ ಇಲಾಖೆ ಸುಪರ್ದಿಗೆ ಗಿರಿಧಾಮ ಹೋದರೆ ಐಷರಾಮಿ ಕಟ್ಟಡಗಳು ತಲೆಯೆತ್ತಲಿದ್ದು, ಪ್ರಾಚೀನ ಗಿಡ ಮೂಲಿಕೆಗಳು ಹಾಗೂ ವಿವಿಧ ಪ್ರಬೇಧದ ಪಕ್ಷಿ ಸಂಕುಲಗಳು ನಾಶ ಹೊಂದಲಿವೆ’ ಎಂಬುದು ಇಲ್ಲಿನ ಪರಿಸರವಾದಿಗಳ ಅಭಿಪ್ರಾಯ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>