‘ಮಗುವನ್ನು ಸಾಕಲು ನಿಮಗೆ ಸಾಧ್ಯ ಇಲ್ಲ. ಅದನ್ನು ಇಲ್ಲೇ ಕೊಟ್ಟು ಹೋಗಿ. ಇಲ್ಲದಿದ್ದರೆ, ಮದುವೆಯಾಗದೆ ಮಗು ಹೆತ್ತಿರುವುದನ್ನು ಪೊಲೀಸರಿಗೆ ತಿಳಿಸುತ್ತೇನೆ. ಡಿಸ್ಚಾರ್ಜ್ ಮಾಡಲ್ಲ ಎಂದು ಡಾ.ಬಾಲಕೃಷ್ಣ ಬೆದರಿಕೆ ಹಾಕಿದ್ದರು ಎಂದು ಸಂತ್ರಸ್ತೆಯ ತಾಯಿ ತಿಳಿಸಿದ್ದಾರೆ. ಹೀಗಾಗಿ, ವೈದ್ಯ ತಿಳಿಸಿದ ವ್ಯಕ್ತಿಗಳಿಗೆ ಮಗು ನೀಡಿದೆವು. ಮಗು ಖರೀದಿಸಿದವರು ಹೆತ್ತ ತಾಯಿ ಕಡೆಯವರಿಗೆ ₹ 5 ಸಾವಿರ, ವೈದ್ಯರಿಗೆ ₹ 50 ಸಾವಿರ ನೀಡಿದರು ಎಂದೂ ಅವರು ತಿಳಿಸಿದ್ದಾರೆ’ ಎಂದು ದೂರಿನಲ್ಲಿ ತಿಳಿಸಲಾಗಿದೆ.