<p><strong>ಕೊಪ್ಪ</strong>: ಪಟ್ಟಣ ಸಮೀಪದ ಸಣ್ಣಕೆರೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಇಕೋ ಕ್ಲಬ್ ಮತ್ತು ಕಲಿ ಕಲಿಸು ಯೋಜನೆಯ ಚಟುವಟಿಕೆಗಾಗಿ ಕ್ಷೇತ್ರ ಭೇಟಿ ಹಮ್ಮಿಕೊಳ್ಳಲಾಗಿತ್ತು.</p>.<p>ಶಾಲೆಯ ಸಮೀಪದ ಸತೀಶ್ ಶೆಟ್ಟಿ ಅವರ ಮಾಲೀಕತ್ವದ ಕಂಚಿನಕೊಡಿಗೆ ಎಸ್ಟೇಟ್ನಲ್ಲಿ ಕಾಫಿ ಹೂವುಗಳು ಅರಳಿದ್ದು, ಅದರ ಮೇಲೆ ಕುಳಿತು ಮಕರಂದ ಹೀರುವ ಜೇನುಹುಳುಗಳ(ಪರಾಗ ಸ್ಪರ್ಶ) ಬಗ್ಗೆ ತಿಳಿಯಲು ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭೇಟಿ ಕೊಟ್ಟಿದ್ದರು.</p>.<p>ಕಾಫಿ ತೋಟದ ವ್ಯವಸ್ಥಾಪಕ ಬಾಲಕೃಷ್ಣ ಅವರು ಮಕ್ಕಳಿಗೆ ಕಾಫಿ ಹೂವು ಅರಳಿದಾಗ ಪರಾಗಸ್ಪರ್ಶದಲ್ಲಿ ಜೇನು ಹುಳುಗಳ ಪಾತ್ರ, ಜೇನು ಹುಳುಗಳು ಮಕರಂದ ಹೀರುವ ಬಗೆ, ಜೇನು ನಿರುಪದ್ರವಿಯಾಗಿರುವ ಮತ್ತು ಸಿಟ್ಟಾಗುವ ಸಂದರ್ಭಗಳ ಬಗ್ಗೆ ಮಾಹಿತಿ ನೀಡಿದರು.</p>.<p>ಮುಖ್ಯ ಶಿಕ್ಷಕಿ ಭಾರತಿ ಎ. ಮಾತನಾಡಿ, ‘ಬೆಂಗಳೂರಿನ ಇಂಡಿಯಾ ಫೌಂಡೇಷನ್ ಫಾರ್ ದಿ ಆರ್ಟ್ಸ್ ಸಂಸ್ಥೆಯ ಸಹಭಾಗಿತ್ವದಲ್ಲಿ ಶಾಲೆಯಲ್ಲಿ ‘ಜೇನು-ನಾನು’ ಎಂಬ ನಿಸರ್ಗದ ನಡುವೆ ಕಲಿಕೆಯ ಕಲಾಂತರ್ಗತ ಯೋಜನೆ ನಡೆಸುತ್ತಿದ್ದು, ಮಕ್ಕಳು ಜೇನು ವೀಕ್ಷಣೆಯ ಅನುಭವಗಳನ್ನು ಕಲಾ ಮಾಧ್ಯಮದ ಮೂಲಕ ದಾಖಲಿಸಿದ್ದಾರೆ’ ಎಂದು ತಿಳಿಸಿದರು.</p>.<p>ಸಹ ಶಿಕ್ಷಕಿ ಆಶಾಲತಾ ಬಿ., ಅತಿಥಿ ಶಿಕ್ಷಕಿ ಸುಮಾ, ಸ್ಥಳೀಯರಾದ ಶಂಕರ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಪ್ಪ</strong>: ಪಟ್ಟಣ ಸಮೀಪದ ಸಣ್ಣಕೆರೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಇಕೋ ಕ್ಲಬ್ ಮತ್ತು ಕಲಿ ಕಲಿಸು ಯೋಜನೆಯ ಚಟುವಟಿಕೆಗಾಗಿ ಕ್ಷೇತ್ರ ಭೇಟಿ ಹಮ್ಮಿಕೊಳ್ಳಲಾಗಿತ್ತು.</p>.<p>ಶಾಲೆಯ ಸಮೀಪದ ಸತೀಶ್ ಶೆಟ್ಟಿ ಅವರ ಮಾಲೀಕತ್ವದ ಕಂಚಿನಕೊಡಿಗೆ ಎಸ್ಟೇಟ್ನಲ್ಲಿ ಕಾಫಿ ಹೂವುಗಳು ಅರಳಿದ್ದು, ಅದರ ಮೇಲೆ ಕುಳಿತು ಮಕರಂದ ಹೀರುವ ಜೇನುಹುಳುಗಳ(ಪರಾಗ ಸ್ಪರ್ಶ) ಬಗ್ಗೆ ತಿಳಿಯಲು ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭೇಟಿ ಕೊಟ್ಟಿದ್ದರು.</p>.<p>ಕಾಫಿ ತೋಟದ ವ್ಯವಸ್ಥಾಪಕ ಬಾಲಕೃಷ್ಣ ಅವರು ಮಕ್ಕಳಿಗೆ ಕಾಫಿ ಹೂವು ಅರಳಿದಾಗ ಪರಾಗಸ್ಪರ್ಶದಲ್ಲಿ ಜೇನು ಹುಳುಗಳ ಪಾತ್ರ, ಜೇನು ಹುಳುಗಳು ಮಕರಂದ ಹೀರುವ ಬಗೆ, ಜೇನು ನಿರುಪದ್ರವಿಯಾಗಿರುವ ಮತ್ತು ಸಿಟ್ಟಾಗುವ ಸಂದರ್ಭಗಳ ಬಗ್ಗೆ ಮಾಹಿತಿ ನೀಡಿದರು.</p>.<p>ಮುಖ್ಯ ಶಿಕ್ಷಕಿ ಭಾರತಿ ಎ. ಮಾತನಾಡಿ, ‘ಬೆಂಗಳೂರಿನ ಇಂಡಿಯಾ ಫೌಂಡೇಷನ್ ಫಾರ್ ದಿ ಆರ್ಟ್ಸ್ ಸಂಸ್ಥೆಯ ಸಹಭಾಗಿತ್ವದಲ್ಲಿ ಶಾಲೆಯಲ್ಲಿ ‘ಜೇನು-ನಾನು’ ಎಂಬ ನಿಸರ್ಗದ ನಡುವೆ ಕಲಿಕೆಯ ಕಲಾಂತರ್ಗತ ಯೋಜನೆ ನಡೆಸುತ್ತಿದ್ದು, ಮಕ್ಕಳು ಜೇನು ವೀಕ್ಷಣೆಯ ಅನುಭವಗಳನ್ನು ಕಲಾ ಮಾಧ್ಯಮದ ಮೂಲಕ ದಾಖಲಿಸಿದ್ದಾರೆ’ ಎಂದು ತಿಳಿಸಿದರು.</p>.<p>ಸಹ ಶಿಕ್ಷಕಿ ಆಶಾಲತಾ ಬಿ., ಅತಿಥಿ ಶಿಕ್ಷಕಿ ಸುಮಾ, ಸ್ಥಳೀಯರಾದ ಶಂಕರ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>