ನಗರೋತ್ಥಾನದಿಂದ ಮಳಿಗೆ ದುರಸ್ತಿ ಕಾಮಗಾರಿ ನಡೆಯಲಿದೆ. ಮುಂದಿನ ವಾರ ಕೆಲಸ ಆರಂಭಿಸುವುದಾಗಿ ಗುತ್ತಿಗೆದಾರರು ತಿಳಿಸಿದ್ದಾರೆ.
ಗಾಯತ್ರಿ ವಸಂತ್ ಪಟ್ಟಣ ಪಂಚಾಯಿತಿ ಅಧ್ಯಕ್ಷೆ (ನಿರ್ಗಮಿತ)
‘ಈಡೇರದ ಭರವಸೆ’
ಈ ಬಸ್ ನಿಲ್ದಾಣದ ಕಟ್ಟಡ ತೆರವುಗೊಳಿಸಲು ಮುಂದಾಗಿದ್ದಕ್ಕೆ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗಿ ಪ್ರಕರಣ ನ್ಯಾಯಾಲಯದಲ್ಲಿತ್ತು. ಪ್ರಕರಣ ಇತ್ಯರ್ಥಗೊಂಡು ಈಗ 7 ವರ್ಷ ಕಳೆದಿದೆ. ನಗರೋತ್ಥಾನದಲ್ಲಿ ₹20 ಲಕ್ಷ ಮೀಸಲಿಟ್ಟಿದ್ದು ಮಳಿಗೆ ದುರಸ್ತಿಪಡಿಸಿ ತಿಂಗಳೊಳಗೆ ಹರಾಜು ಪ್ರಕ್ರಿಯೆ ನಡೆಸುವುದಾಗಿ ಅಂದಿನ ಮುಖ್ಯಾಧಿಕಾರಿ (2022ರಲ್ಲಿ) ಹೇಳಿದ್ದರು. ಆದರೆ ಕಾಮಗಾರಿ ಈವರೆಗೂ ಆರಂಭಿಸಿಲ್ಲ.