ಜಾತ್ರೆ ಸ್ಥಳ ಲಕ್ಕವಳ್ಳಿ ಗ್ರಾಮದ ಶ್ರೀ ದೇವಿಯ ಮಾರಿ ಗದ್ದುಗೆಯಿಂದ ಬುಧವಾರ, ಮೂರ್ತಿಯನ್ನು ವಿದ್ಯುದ್ದೀಪಗಳಿಂದ ಅಲಂಕರಿಸಿದ ರಥದಲ್ಲಿ ಕುಳ್ಳಿರಿಸಿ ರಾಜಬೀದಿಯಲ್ಲಿ ಮೆರವಣಿಗೆ ನಡೆಸಿ ಗಡಿಸ್ಥಳ ಮಾರಿದಿಬ್ಬದಲ್ಲಿ ವಿಸರ್ಜಿಸಲಾಯಿತು. ಕವಾಡಿ ನೃತ್ಯ, ತಮಿಳು ಸಮಾಜದ ವತಿಯಿಂದ ತಮಿಳುನಾಡಿನ ಕೀಲುಕುದುರೆ, ಕರಗಾಟ, ವಾದ್ಯಗೋಷ್ಠಿ ಮುಂತಾದ ಮನರಂಜನೆ ಕಾರ್ಯಕ್ರಮಗಳು ಮೆರವಣಿಗೆಗೆ ವಿಶೇಷ ಮೆರುಗು ನೀಡಿದವು.