‘15 ದಿನಗಳಿಂದ ಉಗ್ಗೇಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಗಳ ನಾಲ್ಕಕ್ಕೂ ಅಧಿಕ ಜಾನುವಾರುಗಳು ಒಂದೇ ಸ್ಥಳದಲ್ಲಿ ಸಾವಿಗೀಡಾಗಿವೆ. ಮಂಗಳವಾರ ಜಾನುವಾರು ಸಾವಿಗೀಡಾದ ಸ್ಥಳದಲ್ಲಿ ಬುಧವಾರ ಮತ್ತೊಂದು ಜಾನುವಾರು ಮೃತಪಟ್ಟಿದೆ. ಸಾವಿಗೀಡಾದ ಜಾನುವಾರುಗಳ ಕೊರಳಿನ ಬಳಿ ಗಾಯದ ಗುರುತು ಪತ್ತೆಯಾಗಿದೆ. ಹಸುಗಳ ಸಾವಿಗೆ ಚಿರತೆ ಅಥವಾ ಹುಲಿ ದಾಳಿ ಕಾರಣವಲ್ಲ, ಈ ಭಾಗದಲ್ಲಿ ಹುಲಿ ಚಿರತೆಗಳು ಕಂಡುಬಂದಿಲ್ಲ ಎಂದು ಅರಣ್ಯ ಇಲಾಖೆ ಸ್ಪಷ್ಟಪಡಿಸಿದೆ. ಇದರ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿರುವ ಸಂಶಯ ವ್ಯಕ್ತವಾಗುತ್ತಿದ್ದು, ಈ ಬಗ್ಗೆ ಪಶು ಇಲಾಖೆ ಅಧಿಕಾರಿಗಳು ಶವ ಪರೀಕ್ಷೆ ನಡೆಸಿ, ಕಾರಣ ಪತ್ತೆ ಮಾಡಬೇಕು’ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಘಟನೆ ಕುರಿತು ಗೊಣೀಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.