ಕೆಜಿಎಫ್ ಮಾಜಿ ಅಧ್ಯಕ್ಷ ಬಿ.ಎಸ್ ಜಯರಾಂ, ಬೆಳಗಾರರ ಸಂಘದ ತಾಲ್ಲೂಕು ಅಧ್ಯಕ್ಷ ಬಿ.ಆರ್ ಬಾಲಕೃಷ್ಣ ಮಾತನಾಡಿದರು. ಕಾಡಾನೆಯಿಂದ ಮೃತಪಟ್ಟ ಶೋಭಾ ಅವರ ಕುಟುಂಬಕ್ಕೆ ಪರಿಹಾರದ ಐದುವರೆ ಲಕ್ಷ ಮೊತ್ತದ ಚೆಕ್ ವಿತರಿಸಲಾಯಿತು. ಕುಂದೂರು ಗ್ರಾಪಂ ಅಧ್ಯಕ್ಷ ವಿಜಯೇಂದ್ರ, ರೈತ ಸಂಘದ ರಾಜ್ಯ ಕಾರ್ಯದರ್ಶಿ ಮಂಜುನಾಥಗೌಡ, ತಾಲ್ಲೂಕು ಅಧ್ಯಕ್ಷ ಪುಟ್ಟಸ್ವಾಮಿಗೌಡ, ಜಿಲ್ಲಾ ಉಪಾಧ್ಯಕ್ಷ ಲಕ್ಷ್ಮಣಗೌಡ, ಕಾಫಿ ಬೆಳೆಗಾರರಾದ ವೆಂಕಟರಾಮ್, ಮನೋಹರ್, ಸಾಗರ್, ಚಂದ್ರೇಗೌಡ ಇದ್ದರು.