<p><strong>ಮೂಡಿಗೆರೆ</strong>: ತಾಲ್ಲೂಕಿನ ಊರುಬಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಐದು ದಿನಗಳಿಂದ ನಡೆಯುತ್ತಿದ್ದ ಕಾಡಾನೆ ‘ಬೈರ’ನನ್ನು ಸೆರೆ ಹಿಡಿಯುವ ಕಾರ್ಯಾಚರಣೆಯನ್ನು ಶನಿವಾರ ಸ್ಥಗಿತಗೊಳಿಸಲಾಗಿದೆ.</p>.<p>ಅಭಿಮನ್ಯು, ಭೀಮಾ, ಗೋಪಾಲಸ್ವಾಮಿ, ಅಜ್ಜಯ್ಯ, ಮಹೇಂದ್ರ, ಪ್ರಶಾಂತ್ ಎಂಬ ಆರು ಸಾಕಾಣೆಗಳನ್ನು ಬೈರನ ಸೆರೆಗಾಗಿ ಐದು ದಿನಗಳ ಹಿಂದೆ ಬೈರಾಪುರ ಗ್ರಾಮಕ್ಕೆ ಕರೆತಂದು, ಊರುಬಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು. ಆದರೆ, ಬೈರನ ಸುಳಿವು ಸಿಗದೇ ಕಾರ್ಯಾಚರಣೆಗೆ ಅಡ್ಡಿಯಾಗಿತ್ತು.</p>.<p>ಕಾರ್ಯಾಚರಣೆಗಾಗಿ ತಂದಿದ್ದ ಅಭಿಮನ್ಯು ಆನೆಗೆ ಅನಾರೋಗ್ಯ ಉಂಟಾಗಿದೆ. ಮತ್ತೊಂದೆಡೆ ಅಜ್ಜಯ್ಯ ಹಾಗೂ ಗೋಪಾಲಸ್ವಾಮಿ ಆನೆಗಳಿಗೆ ಮದ ಬಂದಿದ್ದು, ಈ ಕಾರಣದಿಂದಾಗಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ. ಅಲ್ಲದೆ, ಬೈರ ಕಾಡಾನೆಯು ತಾಲ್ಲೂಕಿನಿಂದ ಬೇರೆ ತಾಲ್ಲೂಕಿನ ಅರಣ್ಯ ಪ್ರದೇಶಕ್ಕೆ ತೆರಳಿರಬಹುದು ಎಂದು ಶಂಕಿಸಲಾಗಿದ್ದು, ಆ ನಿಟ್ಟಿನಲ್ಲಿ ಕಾರ್ಯಾಚರಣೆ ನಿಲ್ಲಿಸಲಾಗಿದೆ. ಮಧ್ಯಾಹ್ನದ ಬಳಿಕ ಸಾಕಾನೆಗಳನ್ನು ಲಾರಿಗಳಲ್ಲಿ ವಾಪಸ್ ಕರೆದೊಯ್ಯಲಾಯಿತು.</p>.<p>‘ಅಭಿಮನ್ಯು’ ಆನೆಗೆ ಅನಾರೋಗ್ಯವಾಗಿದೆ. ಉಳಿದ ಎರಡು ಆನೆಗಳಿಗೆ ಮದವೇರಿದೆ. ಕಾಡಾನೆ ‘ಬೈರ’ ಮೂಡಿಗೆರೆ ಭಾಗದಿಂದ ಸಕಲೇಶಪುರದ ಕಡೆಗೆ ಹೋಗಿದೆ. ಹೀಗಾಗಿ, ‘ಬೈರನ ಸೆರೆ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದೇವೆ ಎಂದು ಚಿಕ್ಕಮಗಳೂರು ಉಪ ಅರಣ್ಯಸಂರಕ್ಷಣಾಧಿಕಾರಿ ಎನ್.ಇ ಕ್ರಾಂತಿ ಅವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.</p>.<p class="Subhead">ಸ್ಥಳೀಯರಿಗೆ ಬೇಸರ: ಕಾಡಾನೆ ದಾಳಿಯಿಂದ ತಾಲ್ಲೂಕಿನಲ್ಲು ಹಲವರು ಸಾವಿಗೀಡಾದ ಬಳಿಕ ಸರ್ಕಾರವು ಬೈರ ಎಂಬ ಕಾಡಾನೆಯನ್ನು ಸೆರೆಹಿಡಿದು ಸ್ಥಳಾಂತರಿಸಲು ಸರ್ಕಾರ ಆದೇಶ ಹೊರಡಿಸಿದ್ದು, ಸ್ಥಳೀಯರಲ್ಲಿ ಕಾಡಾನೆ ದಾಳಿಗೆ ಮುಕ್ತಿ ಸಿಗಬಹುದು ಎಂಬ ನಿರೀಕ್ಷೆ ಮೂಡಿಸಿತ್ತು. ಆದರೆ ಕಾರ್ಯಾಚರಣೆಯು ಯಶಸ್ವಿ ಯಾಗದಿರುವುದಕ್ಕೆ ಸ್ಥಳೀಯರು ಬೇಸರ<br />ವ್ಯಕ್ತಪಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೂಡಿಗೆರೆ</strong>: ತಾಲ್ಲೂಕಿನ ಊರುಬಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಐದು ದಿನಗಳಿಂದ ನಡೆಯುತ್ತಿದ್ದ ಕಾಡಾನೆ ‘ಬೈರ’ನನ್ನು ಸೆರೆ ಹಿಡಿಯುವ ಕಾರ್ಯಾಚರಣೆಯನ್ನು ಶನಿವಾರ ಸ್ಥಗಿತಗೊಳಿಸಲಾಗಿದೆ.</p>.<p>ಅಭಿಮನ್ಯು, ಭೀಮಾ, ಗೋಪಾಲಸ್ವಾಮಿ, ಅಜ್ಜಯ್ಯ, ಮಹೇಂದ್ರ, ಪ್ರಶಾಂತ್ ಎಂಬ ಆರು ಸಾಕಾಣೆಗಳನ್ನು ಬೈರನ ಸೆರೆಗಾಗಿ ಐದು ದಿನಗಳ ಹಿಂದೆ ಬೈರಾಪುರ ಗ್ರಾಮಕ್ಕೆ ಕರೆತಂದು, ಊರುಬಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು. ಆದರೆ, ಬೈರನ ಸುಳಿವು ಸಿಗದೇ ಕಾರ್ಯಾಚರಣೆಗೆ ಅಡ್ಡಿಯಾಗಿತ್ತು.</p>.<p>ಕಾರ್ಯಾಚರಣೆಗಾಗಿ ತಂದಿದ್ದ ಅಭಿಮನ್ಯು ಆನೆಗೆ ಅನಾರೋಗ್ಯ ಉಂಟಾಗಿದೆ. ಮತ್ತೊಂದೆಡೆ ಅಜ್ಜಯ್ಯ ಹಾಗೂ ಗೋಪಾಲಸ್ವಾಮಿ ಆನೆಗಳಿಗೆ ಮದ ಬಂದಿದ್ದು, ಈ ಕಾರಣದಿಂದಾಗಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ. ಅಲ್ಲದೆ, ಬೈರ ಕಾಡಾನೆಯು ತಾಲ್ಲೂಕಿನಿಂದ ಬೇರೆ ತಾಲ್ಲೂಕಿನ ಅರಣ್ಯ ಪ್ರದೇಶಕ್ಕೆ ತೆರಳಿರಬಹುದು ಎಂದು ಶಂಕಿಸಲಾಗಿದ್ದು, ಆ ನಿಟ್ಟಿನಲ್ಲಿ ಕಾರ್ಯಾಚರಣೆ ನಿಲ್ಲಿಸಲಾಗಿದೆ. ಮಧ್ಯಾಹ್ನದ ಬಳಿಕ ಸಾಕಾನೆಗಳನ್ನು ಲಾರಿಗಳಲ್ಲಿ ವಾಪಸ್ ಕರೆದೊಯ್ಯಲಾಯಿತು.</p>.<p>‘ಅಭಿಮನ್ಯು’ ಆನೆಗೆ ಅನಾರೋಗ್ಯವಾಗಿದೆ. ಉಳಿದ ಎರಡು ಆನೆಗಳಿಗೆ ಮದವೇರಿದೆ. ಕಾಡಾನೆ ‘ಬೈರ’ ಮೂಡಿಗೆರೆ ಭಾಗದಿಂದ ಸಕಲೇಶಪುರದ ಕಡೆಗೆ ಹೋಗಿದೆ. ಹೀಗಾಗಿ, ‘ಬೈರನ ಸೆರೆ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದೇವೆ ಎಂದು ಚಿಕ್ಕಮಗಳೂರು ಉಪ ಅರಣ್ಯಸಂರಕ್ಷಣಾಧಿಕಾರಿ ಎನ್.ಇ ಕ್ರಾಂತಿ ಅವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.</p>.<p class="Subhead">ಸ್ಥಳೀಯರಿಗೆ ಬೇಸರ: ಕಾಡಾನೆ ದಾಳಿಯಿಂದ ತಾಲ್ಲೂಕಿನಲ್ಲು ಹಲವರು ಸಾವಿಗೀಡಾದ ಬಳಿಕ ಸರ್ಕಾರವು ಬೈರ ಎಂಬ ಕಾಡಾನೆಯನ್ನು ಸೆರೆಹಿಡಿದು ಸ್ಥಳಾಂತರಿಸಲು ಸರ್ಕಾರ ಆದೇಶ ಹೊರಡಿಸಿದ್ದು, ಸ್ಥಳೀಯರಲ್ಲಿ ಕಾಡಾನೆ ದಾಳಿಗೆ ಮುಕ್ತಿ ಸಿಗಬಹುದು ಎಂಬ ನಿರೀಕ್ಷೆ ಮೂಡಿಸಿತ್ತು. ಆದರೆ ಕಾರ್ಯಾಚರಣೆಯು ಯಶಸ್ವಿ ಯಾಗದಿರುವುದಕ್ಕೆ ಸ್ಥಳೀಯರು ಬೇಸರ<br />ವ್ಯಕ್ತಪಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>