ಅಭಿಮನ್ಯು, ಭೀಮಾ, ಗೋಪಾಲಸ್ವಾಮಿ, ಅಜ್ಜಯ್ಯ, ಮಹೇಂದ್ರ, ಪ್ರಶಾಂತ್ ಎಂಬ ಆರು ಸಾಕಾಣೆಗಳನ್ನು ಬೈರನ ಸೆರೆಗಾಗಿ ಐದು ದಿನಗಳ ಹಿಂದೆ ಬೈರಾಪುರ ಗ್ರಾಮಕ್ಕೆ ಕರೆತಂದು, ಊರುಬಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು. ಆದರೆ, ಬೈರನ ಸುಳಿವು ಸಿಗದೇ ಕಾರ್ಯಾಚರಣೆಗೆ ಅಡ್ಡಿಯಾಗಿತ್ತು.