‘ಈ ಬಾರಿ ಕಾಫಿ ಬೆಳೆಗಾರರ ಪರಿಸ್ಥಿತಿಯನ್ನು ಹೇಳಲು ಅಸಾಧ್ಯ ವಾಗಿದೆ. ಹಣ್ಣಾಗಿರುವ ಕಾಫಿಯ ಮೇಲೆ ಮಳೆ ಸುರಿಯುತ್ತಿದ್ದಂತೆ ಕಳಚಿ ಬೀಳತೊಡಗಿದ್ದು, ಕಾಫಿ ಗಿಡಗಳ ಬುಡದಲ್ಲಿ ರಾಶಿ ರಾಶಿ ಕಾಫಿ ಬಿದ್ದಿವೆ. ರೋಬಾಸ್ಟಾ ಕಾಫಿ ಕೂಡ ಹಣ್ಣಾಗತೊಡಗಿದ್ದು, ಕೊಯಿಲು ಮಾಡಿದರೆ ಒಣಗಿಸಲು ಜಾಗವಿಲ್ಲದಂತಾಗಿದೆ. ಹಸಿ ಕಾಫಿಯನ್ನು ಕೊಂಡುಕೊಳ್ಳಲಾಗುತ್ತದೆಯಾದರೂ, ಸೂಕ್ತ ಬೆಲೆ ಸಿಗುವುದಿಲ್ಲ. ಕಾಫಿಯನ್ನು ಸೂಕ್ತ ಬಿಸಿಲಿನಲ್ಲಿ ಒಣಗಿಸದಿದ್ದರೆ ಗುಣಮಟ್ಟವೂ ಸಿಗುವುದಿಲ್ಲ. ಅಡಿಕೆ ಫಸಲು ಕೂಡ ಕೊಳೆ ರೋಗಕ್ಕೆ ತುತ್ತಾಗುತ್ತಿದೆ. ಈಗಾಗಲೇ ವಾಡಿಕೆ ಮಳೆ ಸುರಿದಾಗಿದೆ. ತೋಟದ ಪರಿಸ್ಥಿತಿ ನೋಡಿದರೆ ಬೇಸರವಾಗುತ್ತದೆ’ ಎಂದು ಅಬಚೂರು ಗ್ರಾಮದ ಕಾಫಿ ಬೆಳೆಗಾರ ಮಯೂರ್ ಅಳಲು ತೋಡಿಕೊಂಡರು.