<p>ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ (ನರೇಗಾ) ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ಸಿಬ್ಬಂದಿಗೆ ಮೇ ತಿಂಗಳಿನಿಂದ ಈವರೆಗೆ ಸಂಬಳ ಪಾವತಿಸಿಲ್ಲ. ಸಿಬ್ಬಂದಿ ಪರಿತಪಿಸುವಂತಾಗಿದೆ.<br />ನರೇಗಾ ಯೋಜನೆಯಲ್ಲಿ ಹೊರಗುತ್ತಿಗೆಯಡಿ 90 ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬೆಂಗಳೂರಿನ ‘ಮಹಾಬಲೇಶ್ವರ ಎಂಟರ್ ಪ್ರೈಸಸ್’ ಸಂಸ್ಥೆಯ ಮೂಲಕ ಈ ಸಿಬ್ಬಂದಿ ಸಂಬಳ ಪಾವತಿಯಾಗುತ್ತಿತ್ತು. ಆರು ತಿಂಗಳಿನಿಂದ ಸಿಬ್ಬಂದಿಗೆ ಸಂಬಳ ಪಾವತಿಸಿಲ್ಲ. ಸಂಬಂಧಪಟ್ಟವರೂಸಮಸ್ಯೆ ಪರಿಹಾರಕ್ಕೆ ಗಮನಹರಿಸಿಲ್ಲ.</p>.<p>‘ಸಂಬಳ ಇಲ್ಲದೆ ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಸಮಸ್ಯೆ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಿಗಳ ಗಮನ ಸೆಳೆದರೂ ಕ್ರಮವಹಿಸಿಲ್ಲ. ಪ್ರತಿಭಟನೆ ಮಾಡಿ ಧ್ವನಿ ಎತ್ತಿದರೆ ಕೆಲಸದಿಂದ ತೆಗೆಯುತ್ತಾರೆ ಎಂಬ ಭಯ. ನಮ್ಮ ಗೋಳು ಕೇಳುವರಿಲ್ಲ’ ಎಂದು ಸಿಬ್ಬಂದಿಯೊಬ್ಬರು ಕಣ್ಣೀರಿಟ್ಟರು.<br />ಕೋವಿಡ್ ತಲ್ಲಣ, ಲಾಕ್ ಡೌನ್ ಸಮಯದಲ್ಲಿಯೂ ಕೇತ್ರಮಟ್ಟದ ಸಿಬ್ಬಂದಿ ದುಡಿದಿದ್ದಾರೆ. ಕೆಲವರು ರಜೆ ಇಲ್ಲದೇ ದುಡಿದಿದ್ದಾರೆ.<br />ಮಹಾಬಲೇಶ್ವರ ಎಂಟರ್ ಪ್ರೈಸಸ್ನವರು ಸಿಬ್ಬಂದಿಯ ಇಪಿಎಫ್ ಮತ್ತು ಇಎಸ್ಐ ಸರಿಯಾಗಿ ಪಾವತಿ ಮಾಡಿಲ್ಲ. ಈ ಸಿಬ್ಬಂದಿ ಸಂಬಳ ಪಾವತಿಗೆ ಸಂಬಂಧಿಸಿದ ‘end2end’ ತಂತ್ರಾಂಶದಲ್ಲಿ ಸಮಸ್ಯೆಯಾಗಿದೆ. ಹೀಗಾಗಿ, ಸಂಬಳ ಪಾವತಿಯಾಗಿಲ್ಲ ಎಂದು ಸಬೂಬು ಹೇಳಲಾಗುತ್ತಿದೆ.<br />ತಂತ್ರಾಂಶ ಬಿಟ್ಟು ಆರ್ಟಿಜಿಎಸ್ ಮೂಲಕ ಪಗಾರ ಪಾವತಿಸುವಂತೆ ಸೂಚನೆ ನೀಡಿದ್ದರೂ ‘ಮಹಾಬಲೇಶ್ವರ ಎಂಟರ್ ಪ್ರೈಸಸ್’ ಸಂಸ್ಥೆ ಕ್ರಮ ವಹಿಸಿಲ್ಲ. ಸಮಸ್ಯೆ ಹಾಗೆಯೇ ಉಳಿದಿದೆ.<br />‘ಸಾಲಸೋಲ ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದೇವೆ. ಅಂಗಡಿಗಳಲ್ಲಿ ದಿನಸಿ ಸಾಲ ತಂದಿದ್ದೇವೆ. ಕಡ ಕೊಟ್ಟವರ ಕಣ್ಣು ತಪ್ಪಿಸಿ ಓಡಾಡಬೇಕಾಗಿದೆ’ ಎಂದು ಸಿಬ್ಬಂದಿಯೊಬ್ಬರು ಗೋಳು ತೋಡಿಕೊಂಡರು.</p>.<p>‘ಪಕ್ಕದ ಜಿಲ್ಲೆ ಸಂಸ್ಥೆಗೆ ಸಂಬಳ ಪಾವತಿ ಹೊಣೆ ವಹಿಸಲು ಚರ್ಚೆ’</p>.<p>ಚೆನ್ನಾಗಿ ನಿರ್ವಹಿಸುತ್ತಿರುವ ಪಕ್ಕದ ಜಿಲ್ಲೆಯ ಸಂಸ್ಥೆಗೆ ಈ ಜಿಲ್ಲೆಯ ನರೇಗಾ ಹೊರಗುತ್ತಿಗೆ ಸಿಬ್ಬಂದಿಯ ಸಂಬಳ ಪಾವತಿ ಜವಾಬ್ದಾರಿಯನ್ನು ವಹಿಸಲು ಸರ್ಕಾರದ ಹಂತದಲ್ಲಿ ಚರ್ಚೆ ನಡೆದಿದೆ. ಸರ್ಕಾರದಿಂದ ನಿರ್ದೇಶನ ಬಂದ ತಕ್ಷಣ ಸಿಬ್ಬಂದಿಗೆ ಸಂಬಳ ಪಾವತಿಯಾಗಲಿದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.</p>.<p>ಮಹಾಬಲೇಶ್ವರ ಸಂಸ್ಥೆಯ ಸಿಬ್ಬಂದಿಯ ಇಪಿಎಫ್, ಇಎಸ್ಐ ಕಟ್ಟಿರಲಿಲ್ಲ. ಸಂಸ್ಥೆಗೆ ಷೋಕಾಸ್ ನೋಟಿಸ್ ನೀಡಿ, ವಿಷಯವನ್ನು ಸರ್ಕಾರದ ಗಮನಕ್ಕೆ ತಂದಿದ್ದೇವೆ ಎಂದು ತಿಳಿಸಿದರು.</p>.<p>ಮಹಾಬಲೇಶ್ವರ ಸಂಸ್ಥೆಯು ಐದು ಜಿಲ್ಲಾ ಪಂಚಾಯಿತಿಗಳ ಟೆಂಡರ್ ಪಡೆದಿದೆ. ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಈ ಸಂಸ್ಥೆ ತಗಾದೆ ಮಾಡಿಕೊಂಡಿದೆ. ಸಂಸ್ಥೆಗೆ ಸಿಬ್ಬಂದಿ ಸಂಬಳದ ಬಿಲ್ ಪಾವತಿಸದೆ ಸರ್ಕಾರಕ್ಕೇ ಕಟ್ಟುವಂತೆ ಸೂಚನೆ ಬಂದಿತ್ತು. ಸಿಬ್ಬಂದಿ ಸಂಬಳ ಬಾಕಿ ಬಗ್ಗೆ ಸರ್ಕಾರ ಮಾಹಿತಿ ಪಡೆದುಕೊಂಡಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ (ನರೇಗಾ) ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ಸಿಬ್ಬಂದಿಗೆ ಮೇ ತಿಂಗಳಿನಿಂದ ಈವರೆಗೆ ಸಂಬಳ ಪಾವತಿಸಿಲ್ಲ. ಸಿಬ್ಬಂದಿ ಪರಿತಪಿಸುವಂತಾಗಿದೆ.<br />ನರೇಗಾ ಯೋಜನೆಯಲ್ಲಿ ಹೊರಗುತ್ತಿಗೆಯಡಿ 90 ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬೆಂಗಳೂರಿನ ‘ಮಹಾಬಲೇಶ್ವರ ಎಂಟರ್ ಪ್ರೈಸಸ್’ ಸಂಸ್ಥೆಯ ಮೂಲಕ ಈ ಸಿಬ್ಬಂದಿ ಸಂಬಳ ಪಾವತಿಯಾಗುತ್ತಿತ್ತು. ಆರು ತಿಂಗಳಿನಿಂದ ಸಿಬ್ಬಂದಿಗೆ ಸಂಬಳ ಪಾವತಿಸಿಲ್ಲ. ಸಂಬಂಧಪಟ್ಟವರೂಸಮಸ್ಯೆ ಪರಿಹಾರಕ್ಕೆ ಗಮನಹರಿಸಿಲ್ಲ.</p>.<p>‘ಸಂಬಳ ಇಲ್ಲದೆ ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಸಮಸ್ಯೆ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಿಗಳ ಗಮನ ಸೆಳೆದರೂ ಕ್ರಮವಹಿಸಿಲ್ಲ. ಪ್ರತಿಭಟನೆ ಮಾಡಿ ಧ್ವನಿ ಎತ್ತಿದರೆ ಕೆಲಸದಿಂದ ತೆಗೆಯುತ್ತಾರೆ ಎಂಬ ಭಯ. ನಮ್ಮ ಗೋಳು ಕೇಳುವರಿಲ್ಲ’ ಎಂದು ಸಿಬ್ಬಂದಿಯೊಬ್ಬರು ಕಣ್ಣೀರಿಟ್ಟರು.<br />ಕೋವಿಡ್ ತಲ್ಲಣ, ಲಾಕ್ ಡೌನ್ ಸಮಯದಲ್ಲಿಯೂ ಕೇತ್ರಮಟ್ಟದ ಸಿಬ್ಬಂದಿ ದುಡಿದಿದ್ದಾರೆ. ಕೆಲವರು ರಜೆ ಇಲ್ಲದೇ ದುಡಿದಿದ್ದಾರೆ.<br />ಮಹಾಬಲೇಶ್ವರ ಎಂಟರ್ ಪ್ರೈಸಸ್ನವರು ಸಿಬ್ಬಂದಿಯ ಇಪಿಎಫ್ ಮತ್ತು ಇಎಸ್ಐ ಸರಿಯಾಗಿ ಪಾವತಿ ಮಾಡಿಲ್ಲ. ಈ ಸಿಬ್ಬಂದಿ ಸಂಬಳ ಪಾವತಿಗೆ ಸಂಬಂಧಿಸಿದ ‘end2end’ ತಂತ್ರಾಂಶದಲ್ಲಿ ಸಮಸ್ಯೆಯಾಗಿದೆ. ಹೀಗಾಗಿ, ಸಂಬಳ ಪಾವತಿಯಾಗಿಲ್ಲ ಎಂದು ಸಬೂಬು ಹೇಳಲಾಗುತ್ತಿದೆ.<br />ತಂತ್ರಾಂಶ ಬಿಟ್ಟು ಆರ್ಟಿಜಿಎಸ್ ಮೂಲಕ ಪಗಾರ ಪಾವತಿಸುವಂತೆ ಸೂಚನೆ ನೀಡಿದ್ದರೂ ‘ಮಹಾಬಲೇಶ್ವರ ಎಂಟರ್ ಪ್ರೈಸಸ್’ ಸಂಸ್ಥೆ ಕ್ರಮ ವಹಿಸಿಲ್ಲ. ಸಮಸ್ಯೆ ಹಾಗೆಯೇ ಉಳಿದಿದೆ.<br />‘ಸಾಲಸೋಲ ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದೇವೆ. ಅಂಗಡಿಗಳಲ್ಲಿ ದಿನಸಿ ಸಾಲ ತಂದಿದ್ದೇವೆ. ಕಡ ಕೊಟ್ಟವರ ಕಣ್ಣು ತಪ್ಪಿಸಿ ಓಡಾಡಬೇಕಾಗಿದೆ’ ಎಂದು ಸಿಬ್ಬಂದಿಯೊಬ್ಬರು ಗೋಳು ತೋಡಿಕೊಂಡರು.</p>.<p>‘ಪಕ್ಕದ ಜಿಲ್ಲೆ ಸಂಸ್ಥೆಗೆ ಸಂಬಳ ಪಾವತಿ ಹೊಣೆ ವಹಿಸಲು ಚರ್ಚೆ’</p>.<p>ಚೆನ್ನಾಗಿ ನಿರ್ವಹಿಸುತ್ತಿರುವ ಪಕ್ಕದ ಜಿಲ್ಲೆಯ ಸಂಸ್ಥೆಗೆ ಈ ಜಿಲ್ಲೆಯ ನರೇಗಾ ಹೊರಗುತ್ತಿಗೆ ಸಿಬ್ಬಂದಿಯ ಸಂಬಳ ಪಾವತಿ ಜವಾಬ್ದಾರಿಯನ್ನು ವಹಿಸಲು ಸರ್ಕಾರದ ಹಂತದಲ್ಲಿ ಚರ್ಚೆ ನಡೆದಿದೆ. ಸರ್ಕಾರದಿಂದ ನಿರ್ದೇಶನ ಬಂದ ತಕ್ಷಣ ಸಿಬ್ಬಂದಿಗೆ ಸಂಬಳ ಪಾವತಿಯಾಗಲಿದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.</p>.<p>ಮಹಾಬಲೇಶ್ವರ ಸಂಸ್ಥೆಯ ಸಿಬ್ಬಂದಿಯ ಇಪಿಎಫ್, ಇಎಸ್ಐ ಕಟ್ಟಿರಲಿಲ್ಲ. ಸಂಸ್ಥೆಗೆ ಷೋಕಾಸ್ ನೋಟಿಸ್ ನೀಡಿ, ವಿಷಯವನ್ನು ಸರ್ಕಾರದ ಗಮನಕ್ಕೆ ತಂದಿದ್ದೇವೆ ಎಂದು ತಿಳಿಸಿದರು.</p>.<p>ಮಹಾಬಲೇಶ್ವರ ಸಂಸ್ಥೆಯು ಐದು ಜಿಲ್ಲಾ ಪಂಚಾಯಿತಿಗಳ ಟೆಂಡರ್ ಪಡೆದಿದೆ. ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಈ ಸಂಸ್ಥೆ ತಗಾದೆ ಮಾಡಿಕೊಂಡಿದೆ. ಸಂಸ್ಥೆಗೆ ಸಿಬ್ಬಂದಿ ಸಂಬಳದ ಬಿಲ್ ಪಾವತಿಸದೆ ಸರ್ಕಾರಕ್ಕೇ ಕಟ್ಟುವಂತೆ ಸೂಚನೆ ಬಂದಿತ್ತು. ಸಿಬ್ಬಂದಿ ಸಂಬಳ ಬಾಕಿ ಬಗ್ಗೆ ಸರ್ಕಾರ ಮಾಹಿತಿ ಪಡೆದುಕೊಂಡಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>