ನೆಲ್ಲಿಬೀಡು ಸಂರಕ್ಷಣಾ ವೇದಿಕೆ ಕಾರ್ಯದರ್ಶಿ ಸುರೇಶ್ ಭಟ್ ಮಾತ ನಾಡಿ, ‘ಸಂಸೆ ಗ್ರಾಮದ ಸರ್ವೆ ನಂಬರ್ 138 ಮತ್ತು 120ರಲ್ಲಿ ಹೆಚ್ಚುವರಿ ಭೂಮಿ ಇದೆ. ಅದನ್ನು ಅರಣ್ಯ ಇಲಾಖೆ ಸರ್ವೆ ಮಾಡಿ ಉಳಿಕೆ ಜಾಗ ಸ್ಥಳೀಯರಿಗೆ ಬಿಡಬೇಕು. ಸರ್ವೆ ನಂಬರ್ 183ರಲ್ಲಿ ಕಂದಾಯ ಭೂಮಿ, ಅಕೇಶಿಯಾ ನೆಡು ತೋಪು ಇದೆ. ಆ ಭೂಮಿಯಲ್ಲಿ ಅರ್ಹ ರೈತರಿಗೆ ಫಾರಂ ನಂಬರ್ 50, 53 ಮತ್ತು 57ರ ಅನ್ವಯ ಸಾಗುವಳಿ ಚೀಟಿ ನೀಡಬೇಕು’ ಎಂದು ಆಗ್ರಹಿಸಿದರು.