ಕಾರ್ಮಿಕನ ಸಾವಿಗೆ ಕಾರಣವಾದ ಆನೆಯನ್ನು ಹಿಡಿದು ಸ್ಥಳಾಂತರಿಸಬೇಕು ಎಂದು ಪ್ರತಿಭಟನಾಕಾರರು ಮೂಡಿಗೆರೆ – ಬೇಲೂರು ರಸ್ತೆಯ ಅರಣ್ಯ ಕಚೇರಿ ಬಳಿ ಮಧ್ಯಾಹ್ನ ಜಮಾಯಿಸಿದರು. ಈ ಸಂದರ್ಭದಲ್ಲಿ ರಸ್ತೆಯಲ್ಲಿ ಕೆಲಕಾಲ ಸಂಚಾರ ಬಂದ್ ಆಗಿತ್ತು. ಸ್ಥಳೀಯರು, ರೈತ ಸಂಘ, ಬೆಳೆಗಾರರ ಸಂಘದವರು ಪಾಲ್ಗೊಂಡಿದ್ದರು. ಘೋಷಣೆಗಳನ್ನು ಕೂಗಿದರು. ಅರಣ್ಯ ಕಚೇರಿ ಆವರಣದ ಗೇಟು ತೆಗೆದು ಒಳಕ್ಕೆ ನುಗ್ಗಿದರು.