ರಾಮನಗರದಲ್ಲಿ ನಡೆಯುತ್ತಿರುವ ಆರ್ಎಸ್ಎಸ್ ಸಮಾವೇಶದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ‘ಡಿ.ಕೆ.ಶಿವಕುಮಾರ್ ತಾನು ಸ್ವಯಂ ಸೇವಕ ಎಂದು ಸದನದಲ್ಲಿ ಪರಿಚಯಿಸಿಕೊಂಡಿದ್ದಾರೆ. ಸಂಘದ ಪ್ರಾರ್ಥನೆಯನ್ನೂ ಹೇಳಿದ್ದಾರೆ. ಸ್ವಯಂಸೇವಕ ಆಗಿದ್ದರೆ ಪಾಲ್ಗೊಳ್ಳುತ್ತಾರೆ, ಆ ಭಾವನೆ ಇದ್ದರೆ ಒಳ್ಳೆಯದನ್ನೇ ಬಯಸುತ್ತಾರೆ’ ಎಂದು ಉತ್ತರಿಸಿದರು.