ಬೆಂಗಳೂರು: ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ಮಾವಿನ ಕೆರೆ ಗ್ರಾಮದ ಅನಂತ ಎಂಬುವವರು ಗುಹೆಯಲ್ಲಿ ವಾಸ ಮಾಡುತ್ತಿರುವ ‘ಪ್ರಜಾವಾಣಿ’ ವರದಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಕ್ಷಣವೇ ಸ್ಪಂದಿಸಿದ್ದಾರೆ.
ಗುರುವಾರ ಬೆಳಿಗ್ಗೆ ‘ಪತ್ರಿಕೆ’ ಓದಿದ ತಕ್ಷಣವೇ ಚಿಕ್ಕಮಗಳೂರು ಜಿಲ್ಲಾಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ, ಕೂಡಲೇ ಆ ಕುಟುಂಬಕ್ಕೆ ವಸತಿ ವ್ಯವಸ್ಥೆ ಮಾಡಿಕೊಡಬೇಕು ಮತ್ತು ಖರ್ಚಿಗೆ ₹1 ಲಕ್ಷ ಕೊಡಬೇಕೆಂದು ಸೂಚನೆ ನೀಡಿದರೆಂದು ಮುಖ್ಯಮಂತ್ರಿ ಕಚೇರಿ ಮೂಲಗಳು ತಿಳಿಸಿವೆ.
ಕಳೆದ ವರ್ಷ ಸುರಿದ ಭಾರಿ ಮಳೆಯಿಂದ ಮನೆ ಕಳೆದುಕೊಂಡಿದ್ದ ಅನಂತ ಅವರ ಕುಟುಂಬ ಬಾಳೆಹೊನ್ನೂರು ಸಮೀಪದ ಕ್ಯಾತನಮಕ್ಕಿ ಬಳಿಕ ಕಲ್ಲಕ್ಕಿಯಲ್ಲಿನ ಗುಹೆಯಲ್ಲಿ ಜೀವನ ಸಾಗಿಸುತ್ತಿತ್ತು. ಈ ಬಗ್ಗೆ ‘ಪ್ರಜಾವಾಣಿ’ ವರದಿ ಪ್ರಕಟಿಸಿತ್ತು.