ಮೂಡಿಗೆರೆ ತಾಲ್ಲೂಕಿನ ಬಾಳೂರು ಗ್ರಾಮದ ವಿಜೇಂದ್ರ ಎಂಬುವವರ ಮನೆಯ ಮೇಲೆ ಮರ ಬಿದ್ದಿರುವುದು
‘ಕೊನೆ ಕ್ಷಣದಲ್ಲಿ ರಜೆ ಕೊಟ್ಟರೆ ತೊಂದರೆ’
‘ಶುಕ್ರವಾರ ಬೆಳಿಗ್ಗೆ 7. 30ಕ್ಕೆ ಶಾಲೆ ಅಂಗನವಾಡಿಗಳಿಗೆ ರಜೆ ಘೋಷಿಸಿದ್ದಕ್ಕೆ ವಿದ್ಯಾರ್ಥಿಗಳು ಪೋಷಕರು ಬೇಸರ ವ್ಯಕ್ತಪಡಿಸಿದರು. ‘ಗ್ರಾಮೀಣ ಭಾಗದಿಂದ ಮನೆಗಳಿಂದ ಬೆಳಿಗ್ಗೆ 7 ಗಂಟೆಗೇ ವಿದ್ಯಾರ್ಥಿಗಳು ಹೊರಡುತ್ತಾರೆ. ಆದರೆ ಕೊನೆ ಕ್ಷಣದಲ್ಲಿ ರಜೆ ಘೋಷಿಸಿದರೆ ಶಾಲೆಗೆ ಬಂದ ಮಕ್ಕಳು ವಾಪಸ್ ಹೋಗಲು ಕಷ್ಟವಾಗುತ್ತದೆ. ಕೆಲವೆಡೆ ಬೆಳಗಿನ ಬಸ್ ಹೊರತು ಪಡಿಸದರೆ ಸಂಜೆಯೇ ಬಸ್ ವ್ಯವಸ್ಥೆಯಿರುವುದರಿಂದ ರಜೆಯ ಅರಿವಿಲ್ಲದೇ ಶಾಲೆಗೆ ಬಂದ ವಿದ್ಯಾರ್ಥಿಗಳು ಸಂಜೆವರೆಗೂ ಅಲೆಯಬೇಕಾಗುತ್ತದೆ. ಮಳೆ ಹೆಚ್ಚಾದಾಗ ಹಿಂದಿನ ದಿನವೇ ರಜೆ ಘೋಷಿಸಿದರೆ ಹೆಚ್ಚು ಅನುಕೂಲವಾಗುತ್ತದೆ’ ಎಂದು ಹಲವು ಪೋಷಕರು ಹೇಳಿದರು.