ಈಗಾಗಲೇ ಮಲೆನಾಡಿನಲ್ಲಿ ಭತ್ತದ ಕಟಾವು ಪ್ರಾರಂಭವಾಗಿದ್ದು, ಹೊರಟ್ಟಿ, ಗುತ್ತಿ, ಕುಂದೂರು, ಬೆಟ್ಟದಮನೆ, ಬಡವನ ದಿಣ್ಣೆ, ಸಬ್ಬೇನಹಳ್ಳಿ, ತತ್ಕೊಳ ಸೇರಿದಂತೆ ವಿವಿಧ ಭಾಗಗಳಲ್ಲಿ ಕಟಾವು ಮಾಡಿದ್ದ ಭತ್ತವೆಲ್ಲವೂ ಮಳೆಗೆ ಸಿಲುಕಿ ಹಾನಿಯಾಗಿದೆ. ಅಲ್ಲದೇ ಅರೇಬಿಕಾ ಕಾಫಿ ಕೊಯ್ಲು ಪ್ರಾರಂಭವಾಗಿದ್ದು, ಅಕಾಲಿಕವಾಗಿ ಸುರಿದ ಮಳೆಯಿಂದ ಕಾಫಿ ಕಣಗಳಲ್ಲಿ ಒಣಗುತ್ತಿದ್ದ ಕಾಫಿಯೆ ಲ್ಲವೂ ಮಳೆಯಿಂದ ಹಾನಿಯಾಗಿದೆ.