<p><strong>ಮೂಡಿಗೆರೆ: </strong>ತಾಲ್ಲೂಕಿನಾದ್ಯಂತ ಶನಿವಾರ ಮಳೆ ಚುರುಕುಗೊಂಡಿದ್ದು ವಿವಿಧೆಡೆ ಧಾರಾಕಾರ ಮಳೆ ಸುರಿಯಿತು.</p>.<p>ಬೆಳಿಗ್ಗೆಯಿಂದಲೂ ಮೋಡ ಕವಿದ ವಾತಾವರಣ ಉಂಟಾಗಿ, ಬಿಟ್ಟು ಬಿಟ್ಟು ಜಿನುಗು ಮಳೆಯಾಗುತ್ತಿತ್ತು. ಸಂಜೆ ಪಟ್ಟಣ ಸೇರಿದಂತೆ ದೇವರುಂದ, ಜನ್ನಾಪುರ, ಬೆಟ್ಟದಮನೆ, ಹ್ಯಾಂಡ್ ಪೋಸ್ಟ್, ಕೊಲ್ಲಿಬೈಲ್, ಬಿದರಹಳ್ಳಿ, ಹೊರಟ್ಟಿ ಭಾಗಗಳಲ್ಲಿ ಧಾರಾಕಾರ ಮಳೆ ಸುರಿಯಿತು.</p>.<p>ಮುಂಗಾರು ಪ್ರವೇಶಕ್ಕೆ ಸಿದ್ಧರಾಗಿ ರುವ ರೈತ ಪಾಳಯವು, ಭತ್ತದ ಗದ್ದೆಗಳನ್ನು ಸಸಿಮಡಿ ನಿರ್ಮಿಸಲು ಸಿದ್ಧ ಮಾಡಿಟ್ಟುಕೊಂಡಿದ್ದು, ಮಳೆಯು, ಅಗಡಿಗಳಿಗೆ ಭತ್ತ ಚೆಲ್ಲಲು ಹದ ತಂದುಕೊಟ್ಟಿತು.</p>.<p>ಕೊಟ್ಟಿಗೆಹಾರ: ಬಣಕಲ್, ಕೊಟ್ಟಿಗೆ ಹಾರ, ಚಾರ್ಮಾಡಿ ಘಾಟಿ, ಬಾಳೂರು, ನಿಡುವಾಳೆ, ಕೆಳಗೂರು ಸೇರಿದಂತೆ ಹಲವಡೆ ಶನಿವಾರ ಮಧ್ಯಾಹ್ನದಿಂದ ಉತ್ತಮ ಮಳೆಯಾಗಿದೆ.</p>.<p>ಮುಂಗಾರು ಮಳೆ ಚುರುಕಾಗಿ ರುವುದರಿಂದ ಕೃಷಿ ಚಟುವಟಿಕೆಗಳು ಗರಿಗೆದರಿವೆ. ಮಳೆಯಾಗಿರುವುದರಿಂದ ಕಾಫಿ ತೋಟದಲ್ಲಿ ಗಿಡಗಳಿಗೆ ಗೊಬ್ಬರ ಹಾಕುವ ಕಾರ್ಯ ಭರದಿಂದ ಸಾಗಿದೆ. ಮುಂಗಾರು ಸಕಾಲಕ್ಕೆ ಬಂದಿರುವುದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.</p>.<p>ಮಳೆಯಿಂದ ಚಳಿ ವಾತಾವರಣ ನಿರ್ಮಾಣವಾಗಿದೆ. ಗದ್ದೆಗಳಲ್ಲಿ ನೀರು ತುಂಬಿಕೊಂಡು ಜಲಾವೃತವಾದಂತೆ ಕಾಣುತ್ತಿದೆ.</p>.<p>ಎನ್.ಆರ್.ಪುರ ಮತ್ತು ತರೀಕೆರೆ ಯಲ್ಲಿ ಸಾಧಾರಣ ಮಳೆಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೂಡಿಗೆರೆ: </strong>ತಾಲ್ಲೂಕಿನಾದ್ಯಂತ ಶನಿವಾರ ಮಳೆ ಚುರುಕುಗೊಂಡಿದ್ದು ವಿವಿಧೆಡೆ ಧಾರಾಕಾರ ಮಳೆ ಸುರಿಯಿತು.</p>.<p>ಬೆಳಿಗ್ಗೆಯಿಂದಲೂ ಮೋಡ ಕವಿದ ವಾತಾವರಣ ಉಂಟಾಗಿ, ಬಿಟ್ಟು ಬಿಟ್ಟು ಜಿನುಗು ಮಳೆಯಾಗುತ್ತಿತ್ತು. ಸಂಜೆ ಪಟ್ಟಣ ಸೇರಿದಂತೆ ದೇವರುಂದ, ಜನ್ನಾಪುರ, ಬೆಟ್ಟದಮನೆ, ಹ್ಯಾಂಡ್ ಪೋಸ್ಟ್, ಕೊಲ್ಲಿಬೈಲ್, ಬಿದರಹಳ್ಳಿ, ಹೊರಟ್ಟಿ ಭಾಗಗಳಲ್ಲಿ ಧಾರಾಕಾರ ಮಳೆ ಸುರಿಯಿತು.</p>.<p>ಮುಂಗಾರು ಪ್ರವೇಶಕ್ಕೆ ಸಿದ್ಧರಾಗಿ ರುವ ರೈತ ಪಾಳಯವು, ಭತ್ತದ ಗದ್ದೆಗಳನ್ನು ಸಸಿಮಡಿ ನಿರ್ಮಿಸಲು ಸಿದ್ಧ ಮಾಡಿಟ್ಟುಕೊಂಡಿದ್ದು, ಮಳೆಯು, ಅಗಡಿಗಳಿಗೆ ಭತ್ತ ಚೆಲ್ಲಲು ಹದ ತಂದುಕೊಟ್ಟಿತು.</p>.<p>ಕೊಟ್ಟಿಗೆಹಾರ: ಬಣಕಲ್, ಕೊಟ್ಟಿಗೆ ಹಾರ, ಚಾರ್ಮಾಡಿ ಘಾಟಿ, ಬಾಳೂರು, ನಿಡುವಾಳೆ, ಕೆಳಗೂರು ಸೇರಿದಂತೆ ಹಲವಡೆ ಶನಿವಾರ ಮಧ್ಯಾಹ್ನದಿಂದ ಉತ್ತಮ ಮಳೆಯಾಗಿದೆ.</p>.<p>ಮುಂಗಾರು ಮಳೆ ಚುರುಕಾಗಿ ರುವುದರಿಂದ ಕೃಷಿ ಚಟುವಟಿಕೆಗಳು ಗರಿಗೆದರಿವೆ. ಮಳೆಯಾಗಿರುವುದರಿಂದ ಕಾಫಿ ತೋಟದಲ್ಲಿ ಗಿಡಗಳಿಗೆ ಗೊಬ್ಬರ ಹಾಕುವ ಕಾರ್ಯ ಭರದಿಂದ ಸಾಗಿದೆ. ಮುಂಗಾರು ಸಕಾಲಕ್ಕೆ ಬಂದಿರುವುದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.</p>.<p>ಮಳೆಯಿಂದ ಚಳಿ ವಾತಾವರಣ ನಿರ್ಮಾಣವಾಗಿದೆ. ಗದ್ದೆಗಳಲ್ಲಿ ನೀರು ತುಂಬಿಕೊಂಡು ಜಲಾವೃತವಾದಂತೆ ಕಾಣುತ್ತಿದೆ.</p>.<p>ಎನ್.ಆರ್.ಪುರ ಮತ್ತು ತರೀಕೆರೆ ಯಲ್ಲಿ ಸಾಧಾರಣ ಮಳೆಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>