ಇತರ ಜಿಲ್ಲೆಗಳಿಗೆ ಹೋಲಿಸಿದರೆ ಈವರೆಗೆ ಕಾಫಿನಾಡು ಕೋವಿಡ್ ವಿಚಾರದಲ್ಲಿ ತುಸು ಸುರಕ್ಷಾ ವಲಯದಲ್ಲಿದೆ. ಈ ನಿಟ್ಟಿನಲ್ಲಿ ಕೊರೊನಾ ವಾರಿಯರ್ಸ್ಗಳ ಕಾರ್ಯ ಅನನ್ಯ. ಕೊರೊನಾ ವೈರಾಣು ಪತ್ತೆಗೆ ಶಂಕಿತರ (ಜ್ವರ, ಶೀತ, ಕೆಮ್ಮು, ಉಸಿರಾಟ ತೊಂದರೆ....) ಗಂಟಲ, ಮೂಗಿನ ದ್ರವ ಮಾದರಿ ಸಂಗ್ರಹಿಸಿ ಪರೀಕ್ಷಿಸಬೇಕು. ಮಾದರಿ ಸಂಗ್ರಹ ಸವಾಲಿನ ಕಾರ್ಯ. ಜಿಲ್ಲೆಯಲ್ಲಿ ವೆಂಕಟೇಶ್ ಅವರು ಪ್ರಸ್ತುತ ಅತಿಹೆಚ್ಚು ಮಾದರಿ ಸಂಗ್ರಹಿಸಿದ ‘ಸಾಹಸಿ’.