ನಗರದ ಜಿಲ್ಲಾ ಆಟದ ಮೈದಾನದಲ್ಲಿ ಬುಧವಾರ ಗಣರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದರು. ‘ಈ ಮೂರು ದಿನಗಳು ಸಂಭ್ರಮದ ದಿನಗಳು ಮಾತ್ರವಲ್ಲ, ಪ್ರತಿಯೊಬ್ಬ ಭಾರತೀಯನ ಪಾಲಿಗೂ ಆತ್ಮವಾಲೋಕನದ ದಿನಗಳು. ಭೂತಕಾಲದ ಪರಂಪರೆ, ವರ್ತಮಾನದ ಸಮಸ್ಯೆ–ಸವಾಲುಗಳು, ಭವಿಷ್ಯದ ಕನಸು ಈ ಮೂರು ಕಾಲದ ಅರಿವನ್ನು ಮನನ ಮಾಡುವ ಪವಿತ್ರ ದಿನಗಳು. ಭಾರತದ ಶ್ರೀಮಂತ ಪರಂಪರೆಯ ಹೆಜ್ಜೆಗಳನ್ನು ಅನುಸರಿಸಿ ನಡೆಯಬೇಕಾದ, ದೇಶದ ಘನತೆ– ಸಾರ್ವಭೌಮತೆ ಎತ್ತಿ ಹಿಡಿಯುವ ಸಂಕಲ್ಪ ಮಾಡಬೇಕಾದ ಅಪೂರ್ವ ದಿನಗಳು’ ಎಂದು ಬಣ್ಣಿಸಿದರು.