<p><strong>ನರಸಿಂಹರಾಜಪುರ: </strong>ಸಪ್ತಾಸ್ಮಿ ಕಿರು ಚಿತ್ರದಲ್ಲಿ ಮಕ್ಕಳು ಅದ್ಭುತವಾಗಿ ನಟನೆ ಮಾಡಿದ್ದಾರೆ ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯನಂಜುಂಡಸ್ವಾಮಿ ಹೇಳಿದರು.</p>.<p>ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಮಕ್ಕಳ ಕಿರು ಚಿತ್ರ ಸಪ್ತಾಸ್ಮಿ ಬಿಡುಗಡೆ ಮಾಡಿ ಅವರು ಮಾತನಾಡಿದರು.</p>.<p>ಸಪ್ತಾಸ್ಮಿ ಕಿರು ಚಿತ್ರದ ನಿರ್ದೇಶಕ ಎಂ.ಪಿ.ಪ್ರದೀಪ್ ಮಾತನಾಡಿ, ತಾಯಿಗೆ ಉತ್ತಮ ಸ್ಥಾನ ನೀಡಲು ಮಕ್ಕಳು ತಂತ್ರಜ್ಞಾನ ಬಳಸಿಕೊಳ್ಳುವ ರೀತಿಯನ್ನು ತಿಳಿಸಿದ್ದೇನೆ. ಯೂಟ್ಯೂಬ್ನಲ್ಲಿ ಸಪ್ತಾಸ್ಮಿ ವೀಕ್ಷಿಸಬಹುದು’ ಎಂದರು.</p>.<p>ಯುವರಕ್ಷ ಸಾಮಾಜಿಕ ಮತ್ತು ಮಾನಸಿಕ ಆರೋಗ್ಯ ಕಲ್ಯಾಣ ಸಂಸ್ಥೆಯ ಅಧ್ಯಕ್ಷ ಡಾ.ಸರವಣ ಕದಿರುವೇಲ್, ಪ್ರಾಂಶುಪಾಲ ಡಾ.ಕೆ.ಉಮೇಶ್ ಮಾತನಾಡಿದರು.</p>.<p>ಸಿಡಿಪಿಒ ಟಿ.ಆರ್.ನಿರಂಜನ<br />ಮೂರ್ತಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಎಂ.ಆರ್.ನಿರಂಜನ್, ಸುನಿತಾ ಇದ್ದರು. ಪೋಷಕರು ಅನಿಸಿಕೆ ವ್ಯಕ್ತಪಡಿಸಿದರು. ಕಿರು ಚಿತ್ರ ತಂಡವನ್ನು ಅಭಿನಂದಿಸಲಾಯಿತು. ಸಪ್ತಾಸ್ಮಿ ಕಿರುಚಿತ್ರದಲ್ಲಿ ಪುಟಾಣಿ ಕಲಾವಿದರಾದ ಮಿಷ್ಕಿ, ಅರುಷ್ ಗೌಡ, ಯಾಮಿನಿ, ಅನುಷ್, ಪ್ರಜ್ವಲ್, ಸನ್ನಿ, ಅಂಜನಾ ಅಭಿನಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನರಸಿಂಹರಾಜಪುರ: </strong>ಸಪ್ತಾಸ್ಮಿ ಕಿರು ಚಿತ್ರದಲ್ಲಿ ಮಕ್ಕಳು ಅದ್ಭುತವಾಗಿ ನಟನೆ ಮಾಡಿದ್ದಾರೆ ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯನಂಜುಂಡಸ್ವಾಮಿ ಹೇಳಿದರು.</p>.<p>ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಮಕ್ಕಳ ಕಿರು ಚಿತ್ರ ಸಪ್ತಾಸ್ಮಿ ಬಿಡುಗಡೆ ಮಾಡಿ ಅವರು ಮಾತನಾಡಿದರು.</p>.<p>ಸಪ್ತಾಸ್ಮಿ ಕಿರು ಚಿತ್ರದ ನಿರ್ದೇಶಕ ಎಂ.ಪಿ.ಪ್ರದೀಪ್ ಮಾತನಾಡಿ, ತಾಯಿಗೆ ಉತ್ತಮ ಸ್ಥಾನ ನೀಡಲು ಮಕ್ಕಳು ತಂತ್ರಜ್ಞಾನ ಬಳಸಿಕೊಳ್ಳುವ ರೀತಿಯನ್ನು ತಿಳಿಸಿದ್ದೇನೆ. ಯೂಟ್ಯೂಬ್ನಲ್ಲಿ ಸಪ್ತಾಸ್ಮಿ ವೀಕ್ಷಿಸಬಹುದು’ ಎಂದರು.</p>.<p>ಯುವರಕ್ಷ ಸಾಮಾಜಿಕ ಮತ್ತು ಮಾನಸಿಕ ಆರೋಗ್ಯ ಕಲ್ಯಾಣ ಸಂಸ್ಥೆಯ ಅಧ್ಯಕ್ಷ ಡಾ.ಸರವಣ ಕದಿರುವೇಲ್, ಪ್ರಾಂಶುಪಾಲ ಡಾ.ಕೆ.ಉಮೇಶ್ ಮಾತನಾಡಿದರು.</p>.<p>ಸಿಡಿಪಿಒ ಟಿ.ಆರ್.ನಿರಂಜನ<br />ಮೂರ್ತಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಎಂ.ಆರ್.ನಿರಂಜನ್, ಸುನಿತಾ ಇದ್ದರು. ಪೋಷಕರು ಅನಿಸಿಕೆ ವ್ಯಕ್ತಪಡಿಸಿದರು. ಕಿರು ಚಿತ್ರ ತಂಡವನ್ನು ಅಭಿನಂದಿಸಲಾಯಿತು. ಸಪ್ತಾಸ್ಮಿ ಕಿರುಚಿತ್ರದಲ್ಲಿ ಪುಟಾಣಿ ಕಲಾವಿದರಾದ ಮಿಷ್ಕಿ, ಅರುಷ್ ಗೌಡ, ಯಾಮಿನಿ, ಅನುಷ್, ಪ್ರಜ್ವಲ್, ಸನ್ನಿ, ಅಂಜನಾ ಅಭಿನಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>