ಮೂಡಿಗೆರೆ: ಚುನಾವಣೆ ಘೋಷಣೆಯಾಗಿದ್ದ ಗೌಡಳ್ಳಿ ಕೃಷಿಪತ್ತಿನ ಸಹಕಾರ ಸಂಘಕ್ಕೆ ಹನ್ನೊಂದು ಮಂದಿ ನಿರ್ದೇಶಕರು ಸೋಮವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಜಿ.ಕೆ ದಿವಾಕರ, ಎಚ್.ಜಿ ವೆಂಕಟೇಶ್, ಕೆ.ಎಲ್ ಚಂದ್ರೇಗೌಡ, ಎಂ.ಎಸ್ ಸಂತೋಷ್, ಬಿ.ಬಿ ವೀಣೇಶ್, ಬಿ.ಪಿ ಕೃಷ್ಣೇಗೌಡ, ಎಚ್.ಕೆ ಲಿಂಗಪ್ಪ, ಎಂ.ಪಿ ಅರುಣ್, ಜಯಮ್ಮ, ಸುಮರವಿಕುಮಾರ್, ಜಿ.ಟಿ ರಮೇಶ್ ಅವಿರೋಧವಾಗಿ ಆಯ್ಕೆಯಾದ ಅಭ್ಯರ್ಥಿಗಳಾಗಿದ್ದಾರೆ. ಸಹಕಾರ ಸಂಘದ ಕಚೇರಿಯಲ್ಲಿ ನೂತನವಾಗಿ ಆಯ್ಕೆಯಾದ ನಿರ್ದೇಶಕರನ್ನು ಅಭಿನಂದಿಸಲಾಯಿತು. ಗ್ರಾಮಸ್ಥರು, ಸಂಘದ ಪದಾಧಿಕಾರಿಗಳು, ಸದಸ್ಯರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.