<p><strong>ಕಡೂರು</strong>: ‘ಸರ್.ಎಂ.ವಿಶ್ವೇಶ್ವರಯ್ಯನವರು ಕರುನಾಡು ಕಂಡ ಅಪೂರ್ವ ಎಂಜಿನಿಯರ್’ ಎಂದು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಹೇಳಿದರು.</p>.<p>ಪಟ್ಟಣದ ರೋಟರಿ ಸಭಾಂಗಣದಲ್ಲಿ ಭಾನುವಾರ ನಡೆದ ಕಡೂರು ಸಿವಿಲ್ ಎಂಜಿನಿಯರ್ಸ್ ಅಸೋಸಿಯೇಷನ್ ಉದ್ಘಾಟನೆ ಮತ್ತು ಎಂಜಿನಿಯರ್ಸ್ ದಿನಾಚರಣೆಯಲ್ಲಿ ಅವರು ಮಾತನಾಡಿದರು.</p>.<p>ಸರ್.ಎಂ.ವಿ. ಕರ್ನಾಟಕದ ಪ್ರಾತಃ ಸ್ಮರಣೀಯರು. ಅವರ ದೂರದರ್ಶಿತ್ವದಿಂದ ಇಂದು ರಾಜ್ಯ ಮುನ್ನಡೆಯುತ್ತಿದೆ. ಕಡೂರಿನ ಅಭಿವೃದ್ಧಿಗೆ ಎಂಜಿನಿಯರ್ಸ್ ಅಸೋಸಿಯೇಷನ್ ಸಹಕಾರ ಅತ್ಯಗತ್ಯವಾಗಿದೆ’ ಎಂದರು.</p>.<p>ಅಸೋಸಿಯೇಷನ್ ಕಾರ್ಯದರ್ಶಿ ಸಿ.ಎಚ್.ಪ್ರೇಂಕುಮಾರ್ ಮಾತನಾಡಿ, ಸರ್.ಎಂ.ವಿಶ್ವೇಶ್ವರಯ್ಯನವರ ಸಾಧನೆಗಳು ಎಂಜಿನಿಯರ್ಸ್ಗೆ ಸ್ಫೂರ್ತಿ. ಕಡೂರಿನ ಅಂಬೇಡ್ಕರ್ ವೃತ್ತದಿಂದ ಪ್ರವಾಸಿ ಮಂದಿರದ ತನಕದ ರಸ್ತೆಗೆ ವಿಶ್ವೇಶ್ವರಯ್ಯನವರ ಹೆರನ್ನಿಡಲು ಪುರಸಭೆ ಕ್ರಮ ವಹಿಸಬೇಕು. ಅವರ ಸಂಸ್ಮರಣೆಯಲ್ಲಿಯೇ ಕಡೂರಿನಲ್ಲಿ ಈ ಸಂಘ ಸ್ಥಾಪನೆಯಾಗಿದೆ. ಸಂಘದ ಚಟುವಟಿಕೆಗಳು ಸದಾ ಸಮಾಜಮುಖಿಯಾಗಿ ಮುಂದುವರಿಯುತ್ತವೆ’ ಎಂದರು. ಅಸೋಸಿಯೇಷನ್ ಅಧ್ಯಕ್ಷ ರಘುರಾಂ, ಡಿ.ಪ್ರಶಾಂತ್, ತಮ್ಮಯ್ಯ, ಸದಸ್ಯರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಡೂರು</strong>: ‘ಸರ್.ಎಂ.ವಿಶ್ವೇಶ್ವರಯ್ಯನವರು ಕರುನಾಡು ಕಂಡ ಅಪೂರ್ವ ಎಂಜಿನಿಯರ್’ ಎಂದು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಹೇಳಿದರು.</p>.<p>ಪಟ್ಟಣದ ರೋಟರಿ ಸಭಾಂಗಣದಲ್ಲಿ ಭಾನುವಾರ ನಡೆದ ಕಡೂರು ಸಿವಿಲ್ ಎಂಜಿನಿಯರ್ಸ್ ಅಸೋಸಿಯೇಷನ್ ಉದ್ಘಾಟನೆ ಮತ್ತು ಎಂಜಿನಿಯರ್ಸ್ ದಿನಾಚರಣೆಯಲ್ಲಿ ಅವರು ಮಾತನಾಡಿದರು.</p>.<p>ಸರ್.ಎಂ.ವಿ. ಕರ್ನಾಟಕದ ಪ್ರಾತಃ ಸ್ಮರಣೀಯರು. ಅವರ ದೂರದರ್ಶಿತ್ವದಿಂದ ಇಂದು ರಾಜ್ಯ ಮುನ್ನಡೆಯುತ್ತಿದೆ. ಕಡೂರಿನ ಅಭಿವೃದ್ಧಿಗೆ ಎಂಜಿನಿಯರ್ಸ್ ಅಸೋಸಿಯೇಷನ್ ಸಹಕಾರ ಅತ್ಯಗತ್ಯವಾಗಿದೆ’ ಎಂದರು.</p>.<p>ಅಸೋಸಿಯೇಷನ್ ಕಾರ್ಯದರ್ಶಿ ಸಿ.ಎಚ್.ಪ್ರೇಂಕುಮಾರ್ ಮಾತನಾಡಿ, ಸರ್.ಎಂ.ವಿಶ್ವೇಶ್ವರಯ್ಯನವರ ಸಾಧನೆಗಳು ಎಂಜಿನಿಯರ್ಸ್ಗೆ ಸ್ಫೂರ್ತಿ. ಕಡೂರಿನ ಅಂಬೇಡ್ಕರ್ ವೃತ್ತದಿಂದ ಪ್ರವಾಸಿ ಮಂದಿರದ ತನಕದ ರಸ್ತೆಗೆ ವಿಶ್ವೇಶ್ವರಯ್ಯನವರ ಹೆರನ್ನಿಡಲು ಪುರಸಭೆ ಕ್ರಮ ವಹಿಸಬೇಕು. ಅವರ ಸಂಸ್ಮರಣೆಯಲ್ಲಿಯೇ ಕಡೂರಿನಲ್ಲಿ ಈ ಸಂಘ ಸ್ಥಾಪನೆಯಾಗಿದೆ. ಸಂಘದ ಚಟುವಟಿಕೆಗಳು ಸದಾ ಸಮಾಜಮುಖಿಯಾಗಿ ಮುಂದುವರಿಯುತ್ತವೆ’ ಎಂದರು. ಅಸೋಸಿಯೇಷನ್ ಅಧ್ಯಕ್ಷ ರಘುರಾಂ, ಡಿ.ಪ್ರಶಾಂತ್, ತಮ್ಮಯ್ಯ, ಸದಸ್ಯರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>