ಶುಕ್ರವಾರ ನಸಸುಕಿನಲ್ಲಿ ಜಾಣಿಗೆ ಗ್ರಾಮದ ಮೋಹನ್ ಅವರ ತೋಟಕ್ಕೆ ದಾಳಿ ನಡೆಸಿರುವ ಕಾಡುಹಂದಿಗಳ ಗುಂಪು, ಬೇರೂರಿದ್ದ ಅಡಿಕೆ ಗಿಡಗಳನ್ನು ಸಂಪೂರ್ಣ ನಾಶಗೊಳಿಸಿವೆ. ಮಲೆನಾಡು ಭಾಗದಲ್ಲಿ ಬೇಸಿಗೆಯಲ್ಲಿ ಹಸಿ ಮೆಣಸು, ತರಕಾರಿ ಬೆಳೆಗಳನ್ನು ಬೆಳೆಯಲಾಗುತ್ತಿದ್ದು, ನಾಟಿ ಮಾಡಿದ್ದ ಹಸಿಮೆಣಸಿನ ಗಿಡಗಳು, ಬೀನ್ಸ್ ಗಿಡಗಳನ್ನು ಸಹ ತಿಂದು, ತುಳಿದು ಹಾಕಿವೆ.