ಕೂಲಿ ಕಾರ್ಮಿಕ ಪ್ರಸಾದ್ ಮತ್ತು ಪವಿತ್ರ ದಂಪತಿಯ ಮನೆ ಮೇಲೆ ಸಮೀಪದಲ್ಲೇ ಇದ್ದ ದೊಡ್ಡ ಗಾತ್ರದ ಬೀಟೆ ಮರ ಬೆಳಗಿನ ಜಾವ ಬಿದ್ದಿದೆ. ಇದರಿಂದಾಗಿ ಮನೆ ಸಂಪೂರ್ಣವಾಗಿ ಜಖಂಗೊಂಡಿದೆ. ಮನೆಯಲ್ಲಿದ್ದ 10 ವರ್ಷದ ಬಾಲಕಿ ಪ್ರಜ್ಞಾ ಮೈಮೇಲೆ ಮನೆಯ ಸಾಮಗ್ರಿಗಳು ಬಿದ್ದು ಆಕೆಯ ಕೈ ಮುರಿದಿದೆ. ಕಳಸ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ನಂತರ ಆಕೆಯನ್ನು ಕಾರ್ಕಳದ ಆಸ್ಪತ್ರೆಗೆ ದಾಖಲಿಸಲಾಗಿದೆ.